‘ರಾಮನೆಂದರೆ ಪ್ರೀತಿ, ರಾಮನೆಂದರೆ ಅನುಕಂಪ, ರಾಮನೆಂದರೆ ನ್ಯಾಯ'
ರಾಹುಲ್ ಟ್ವೀಟ್
ಹೊಸದಿಲ್ಲಿ: ಮನುಷ್ಯರಲ್ಲಿರಬೇಕಾದ ಅತ್ಯುತ್ತಮ ಗುಣಗಳ ಪ್ರತಿಬಿಂಬವೇ ಶ್ರೀ ರಾಮನಾಗಿದ್ದಾನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ಭೂಮಿ ಪೂಜೆಯಲ್ಲಿ ಭಾಗವಹಿಸುತ್ತಿರುವಂತೆಯೇ ರಾಹುಲ್ ಅವರು ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ.
“ಶ್ರೀ ರಾಮ ಮನುಷ್ಯರಲ್ಲಿರಬೇಕಾದ ಅತ್ಯುತ್ತಮ ಗುಣಗಳ ಪ್ರತಿಬಿಂಬ. ಅವು ನಮ್ಮ ಮನಸ್ಸಿನಾಳದಲ್ಲಿರುವ ಮಾನವತೆಯ ಜೀವಾಳವಾಗಿವೆ'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
“ಶ್ರೀ ರಾಮನೆಂದರೆ ಪ್ರೀತಿ, ಅದು ಅಸಹನೆಯಲ್ಲಿ ಯಾವತ್ತೂ ಕಾಣದು, ರಾಮನೆಂದರೆ ಅನುಕಂಪ, ಅದು ಯಾವತ್ತೂ ಕ್ರೂರತೆಯಲ್ಲಿ ಪ್ರಕಟವಾಗದು, ರಾಮನೆಂದರೆ ನ್ಯಾಯ, ಅದು ಯಾವತ್ತೂ ಅನ್ಯಾಯದಲ್ಲಿ ಕಾಣಿಸದು'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
मर्यादा पुरुषोत्तम भगवान राम सर्वोत्तम मानवीय गुणों का स्वरूप हैं। वे हमारे मन की गहराइयों में बसी मानवता की मूल भावना हैं।
— Rahul Gandhi (@RahulGandhi) August 5, 2020
राम प्रेम हैं
वे कभी घृणा में प्रकट नहीं हो सकते
राम करुणा हैं
वे कभी क्रूरता में प्रकट नहीं हो सकते
राम न्याय हैं
वे कभी अन्याय में प्रकट नहीं हो सकते।