ಬೆಳ್ಳಾರೆ: ರಸ್ತೆಗೆ ಅಡ್ಡವಾಗಿ ಜೋತಾಡುತ್ತಿದ್ದ ವಿದ್ಯುತ್ ತಂತಿ ಸ್ಪರ್ಶ; ಬೈಕ್ ಸವಾರ ಸಜೀವ ದಹನ
ಸುಳ್ಯ, ಆ.11: ರಸ್ತೆಗೆ ಅಡ್ಡವಾಗಿ ಜೋತಾಡುತ್ತಿದ್ದ ವಿದ್ಯುತ್ ತಂತಿ ಸ್ಪರ್ಶಸಿ ಬೈಕ್ ಸವಾರನೋರ್ವ ಸಜೀವ ದಹನಗೊಂಡ ದಾರುಣ ಘಟನೆ ನಿಂತಿಕಲ್ಲು ಬಳಿಯ ಕಲ್ಲೇರಿ ಗುಳಿಗನ ಕಟ್ಟೆ ಬಳಿ ಮಂಗಳವಾರ ಮುಂಜಾನೆ ನಡೆದಿದೆ.
ಮೃತರನ್ನು ಮಂಡೆಕೋಲು ಗ್ರಾಮದ ಮೈತ್ತಡ್ಕ ತಿಮ್ಮಪ್ಪ ಗೌಡ ಎಂಬವರ ಪುತ್ರ ಉಮೇಶ್ ಎಂದು ಗುರುತಿಸಲಾಗಿದೆ. ಇವರು ಬಳ್ಪದಲ್ಲಿರುವ ಪತ್ನಿಯ ಮನೆ ಹೋಗಿದ್ದವರು ಮನೆಗೆ ಹಿಂದಿರುಗುವಾಗ ಈ ಅವಘಡ ಸಂಭವಿಸಿದೆ.
ನಿಂತಿಕಲ್ಲು ಬಳಿಯ ಕಲ್ಲೇರಿ ಗುಳಿಗನ ಕಟ್ಟೆ ಬಳಿ ವಿದ್ಯುತ್ ಪ್ರವಹಿಸುತ್ತಿದ್ದ ಹೈಟೆನ್ಶನ್ ತಂತಿ ತುಂಡಾಗಿ ರಸ್ತೆಗಡ್ಡವಾಗಿ ಜೋತಾಡುತ್ತಿತ್ತೆನ್ನಲಾಗಿದೆ. ಬೈಕಿನಲ್ಲಿ ಬರುತ್ತಿದ್ದ ವ್ಯಕ್ತಿಯ ಇದು ಗಮನಕ್ಕೆ ಬರದೆ ಅವರು ತಂತಿಯ ಸ್ಪರ್ಶಕ್ಕೊಳಗಾಗಿದ್ದಾರೆ. ಈ ವೇಳೆ ವಿದ್ಯುತ್ ತಂತಿಗೆ ಬೈಕ್ ಉರುಳಿಬಿದ್ದಿದ್ದು, ಬೆಂಕಿ ಕಾಣಿಸಿಕೊಂಡಿದ್ದು, ಸವಾರ ಮತ್ತು ಬೈಕ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
Next Story