ಇಂತಹ ಚರ್ಚೆಗಳು ಬೇಕೇ?
ಮಾನ್ಯರೇ,
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ನಟನೊಬ್ಬನ ಸಾವಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇಂತಹದೇ ಚರ್ಚೆ ದೇಶಾದ್ಯಂತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಬಗ್ಗೆ ನಡೆದಿದ್ದರೆ?.
ದೇಶದಲ್ಲಿ ಮಾರ್ಚ್ ತಿಂಗಳಿಂದ ಕೋಟ್ಯಂತರ ಭಾರತೀಯರು ಕೆಲಸ ಕಳೆದುಕೊಂಡು ತಮ್ಮ ಕುಟುಂಬ ನಿರ್ವಹಣೆಗಾಗಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ವಿದ್ಯಾವಂತರೂ ಸೇರಿ ಜನಸಾಮಾನ್ಯರು ದುಡಿಮೆಯಿಲ್ಲದೆ ದೈನಂದಿನ ಊಟದ ಖರ್ಚನ್ನೂ ಗಳಿಸಲಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತಂದು ಪರಿಹಾರ ರೂಪಿಸುವಲ್ಲಿ ಚಿಂತಿಸಬೇಕಾದ ಮಾಧ್ಯಮಗಳು ಅದನ್ನು ಬಿಟ್ಟು ತಿಂಗಳಾನುಗಟ್ಟಲೆ ಪ್ರತಿದಿನವೆಂಬಂತೆ ನಟನೊಬ್ಬನ ಸಾವಿನ ಕುರಿತು ಗಂಟೆಗಟ್ಟಲೆ ಚರ್ಚೆ ಮಾಡುವುದು ಈ ಸಂಕಷ್ಟದ ಪರಿಸ್ಥಿತಿಗೆ ಸರಿಯಲ್ಲ.
ಇರ್ಫಾನ್ ರೋಣ, ಬೆಂಗಳೂರು
Next Story