ಅಬ್ದುಲ್ ಕರೀಮ್ ಗಾಡಿಗದ್ದೆ
ಮಂಗಳೂರು, ಸೆ.6: ಪಾವೂರು ಗ್ರಾಮದ ಮಲಾರ್ ಗಾಡಿಗದ್ದೆ ನಿವಾಸಿ ಅಬ್ದುಲ್ ಕರೀಮ್ (80) ರವಿವಾರ ಮುಂಜಾನೆ ಮಲಾರ್ ಪದವಿನಲ್ಲಿರುವ ತನ್ನ ಪುತ್ರನ ಮನೆಯಲ್ಲಿ ನಿಧನರಾದರು.
ಅವರು ಮಲಾರ್ ಹರೇಕಳದ ಮುಹಿಯುದ್ದೀನ್ ಜುಮಾ ಮಸ್ಜಿದ್ ಹಾಗೂ ಮಲಾರ್ ಗಾಡಿಗದ್ದೆಯ ನೂರುಲ್ ಇಸ್ಲಾಮ್ ಮದ್ರಸದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story