ಹಸನ್ ಸಾಹೇಬ್
ಮಂಗಳೂರು, ಸೆ.6: ಕುಂದಾಪುರ ತಾಲೂಕು ಹೊನ್ನಾಳ ನಿವಾಸಿ ಹಸನ್ ಸಾಹೇಬ್(68) ಶನಿವಾರ ಮಧ್ಯರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಅವರು ಹೊನ್ನಾಳ ಖದೀಮಿ ಜಾಮಿಯ ಮಸೀದಿಯಲ್ಲಿ 35 ವರ್ಷಗಳ ಕಾಲ ಮುಅಝ್ಝಿನ್ ಆಗಿ ಸೇವೆ ಸಲ್ಲಿಸಿದ್ದರು. ಮೃತರು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ ಮೆಂಟ್ ಫೋರಂನ ರಾಷ್ಟ್ರಾಧ್ಯಕ್ಷ ಶಕೀಲ್ ಹಸನ್ ಎಚ್. ಸಹಿತ ಇಬ್ಬರು ಪುತ್ರರು, ನಾಲ್ವರು ಪುತ್ರಿಯರ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಸಂತಾಪ: ಹಸನ್ ಸಾಹೇಬ್ ಅವರ ನಿಧನಕ್ಕೆ ಆಲ್ ಇಂಡಿಯ ಮುಸ್ಲಿಂ ಡೆವಲಪ್ ಮೆಂಟ್ ಫೋರಂನ ರಾಷ್ಟ್ರೀಯ ವಕ್ತಾರ ಶೇಖ್ ಮುಝಫ್ಫರ್, ರಾಜ್ಯಾಧ್ಯಕ್ಷ ನಸೀರ್ ಅಹಮದ್ ಚಿಕ್ಕಮಗಳೂರು, ಉಪಾಧ್ಯಕ್ಷ ಎಸ್.ಅಬೂಬಕರ್ ಸಜಿಪ, ಪ್ರದಾನ ಕಾರ್ಯದರ್ಶಿ ಷಾ ನವಾಝ್ ಮುಲ್ಲಾ ಬೆಳಗಾವಿ, ದ.ಕ. ಜಿಲ್ಲಾಧ್ಯಕ್ಷ ಆಸಿಫ್ ಚೊಕ್ಕಬೆಟ್ಟು, ಬಂಟ್ವಾಳ ತಾಲೂಕು ಅಧ್ಯಕ್ಷ ಹಾಸಿರ್ ಪೆರಿಮಾರ್, ಹೊನ್ನಾಳ ಖದೀಮಿ ಜಾಮಿಯಾ ಮಸೀದಿಯ ಅಧ್ಯಕ್ಷ ಇಮಾಂ ಸಾಹೇಬ್ ಟಂಕಸಾಲಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದಿರ್ ಬಾಷಾ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story