ಮಳೆಗೆ ತತ್ತರಿಸಿದ ಮಲೆನಾಡು, ಕರಾವಳಿ
ಕರಾವಳಿಯೂ ಸೇರಿದಂತೆ ಮಲೆನಾಡಿನಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಶಿರಾಡಿ ಘಾಟಿ ರಸ್ತೆಯಲ್ಲಿ 5 ಕಡೆಗಳಲ್ಲಿ ಗುಡ್ಡ ಕುಸಿದು ರಸ್ತೆಯ ಮೇಲೆ ಮಣ್ಣು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಶಿರಾಡಿ ಘಾಟಿ ರಸ್ತೆಯಲ್ಲಿ ದ.ಕ. ಜಿಲ್ಲಾ ಗಡಿ ಚಾಮುಂಡೇಶ್ವರಿ ದೇವಳದ ಬಳಿಯಿಂದ ಕೆಂಪುಹೊಳೆ ತನಕ 5 ಕಡೆಗಳಲ್ಲಿ ಗುಡ್ಡ ಜರಿದು ರಸ್ತೆ ಮುಚ್ಚಿ ಹೋಗಿದೆ. ಇದರಿಂದ ಬಸ್ಗಳು ಸೇರಿದಂತೆ ನೂರಾರು ವಾಹನಗಳು ಘಾಟಿ ಮಧ್ಯೆ ಸಿಲುಕಿಕೊಂಡಿದೆ. ಘಾಟಿ ಉದ್ದಕ್ಕೂ ಅಲ್ಲಲ್ಲಿ ಮರಗಳು ಉರುಳಿ ರಸ್ತೆ ಮೇಲೆ ಬಿದ್ದಿದ್ದು, ಹೀಗಾಗಿಯೂ ಘಾಟಿ ರಸ್ತೆಯ ಉದ್ದಕ್ಕೂ ಹಲವು ಕಡೆಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು.
Next Story