‘ಗಾಂಧಿ-ಖಾದಿ’ ಉಳಿಸಿಕೊಳ್ಳಲು ಉಪವಾಸ ಸತ್ಯಾಗ್ರಹ
ರಾಷ್ಟ್ರಪಿತ ಮಹಾತ್ಮಾ ಗಾಂಧಿ ತತ್ವಗಳು, ಖಾದಿ ಮತ್ತು ದೇಶದ ಏಕತೆ ಉಳಿಸುವ ಆಶಯದಿಂದಾಗಿ ಸ್ವಯಂ ಪ್ರೇರಿತ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರದ ಕಲಾವಿದರು, ಯುವಕರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು. ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ಗ್ರಾಮಸೇವಾ ಸಂಘದ ನೇತೃತ್ವದಲ್ಲಿ ನೂರಾರು ಯುವಕರು, ಕಲಾವಿದರು, ಗುಡಿಕೈಗಾರಿಕೆ ಕಾರ್ಮಿಕರು, ಖಾದಿ ಉತ್ಪನ್ನ ಮಾರಾಟಗಾರರು ಸೇರಿ ದಂತೆ ಪ್ರಮುಖರು, ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು, ಸಾಮಾಜಿಕ ಹೋರಾಟಗಳಿಗೆ ಬೆಂಬಲ ವ್ಯಕ್ತಪಡಿಸಿದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಮಾಜಿ ಶಾಸಕ ವೈ.ಎಸ್.ವಿ.ದತ್ತ, ರಂಗಕರ್ಮಿ ಪ್ರಸನ್ನ, ಕಲಾವಿದ ನಾಗರಾಜು ಮತ್ತಿತರರು ಭಾಗವಹಿಸಿದ್ದರು.
Next Story