ಸುವರ್ಣ ಸೌಧಕ್ಕೆ ಮುತ್ತಿಗೆ
ಕಬ್ಬಿನ ಬಾಕಿ ಪಾವತಿ ಮತ್ತು ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಧರಣಿ ನಡೆಸುತ್ತಿರುವ ರೈತರು ಆಯೋಜಿಸಿದ್ದ ಸಭೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಂದು ಸಮಸ್ಯೆಯನ್ನು ಆಲಿಸಲಿಲ್ಲವೆಂದು ಆಕ್ರೋಶಗೊಂಡ ರೈತರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದರು. ಮುಖ್ಯಮಂತ್ರಿ ರೈತರ ಸಭೆಗೆ ಬರುವುದಿಲ್ಲವೆಂಬ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ರೈತರು ಸುವರ್ಣ ಸೌಧದ ಗೇಟ್ ಬೀಗವನ್ನು ಕಲ್ಲಿನಿಂದ ಒಡೆಯಲು ಯತ್ನಿಸಿದರು. ನಂತರ ಭದ್ರತಾ ಸಿಬ್ಬಂದಿಯ ಕೈಯಿಂದ ಕೀ ಕಿತ್ತುಕೊಂಡು ಗೇಟ್ ತೆರೆದಿದ್ದಾರೆ. ಬಳಿಕ ಕಬ್ಬು ತುಂಬಿದ 4 ಲಾರಿಗಳನ್ನು ಸುವರ್ಣ ಸೌಧದೊಳಗೆ ನುಗ್ಗಿಸಿದ್ದಾರೆ.
Next Story