ಮದ್ಯ ನಿಷೇಧಕ್ಕೆ ಬಿಗಿಪಟ್ಟು
ಮದ್ಯ ನಿಷೇಧಕ್ಕೆ ಆಗ್ರಹಿಸಿ ಚಿತ್ರದುರ್ಗದಿಂದ 200 ಕಿ.ಮೀ. ಪಾದಯಾತ್ರೆ ನಡೆಸಿದ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಬುಧವಾರ ಬೆಂಗಳೂರು ತಲುಪಿದರು. ಜ.19ರಂದು ಚಿತ್ರದುರ್ಗದಿಂದ ಆರಂಭವಾದ ಪಾದಯಾತ್ರೆ ಸುಮಾರು 12 ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಸಂಚಾರ ಮಾಡಿ ರಾಜಧಾನಿಗೆ ಆಗಮಿಸಿತು. ನಗರದ ಮಲ್ಲೇಶ್ವರ ಆಟದ ಮೈದಾನದಲ್ಲಿ ತಂಗಿದ್ದ ಹೋರಾಟಗಾರರು ಅಲ್ಲಿಂದ ಸರಕಾರ ಮದ್ಯ ನಿಷೇಧ ಮಾಡಬೇಕು. ಈ ಸಂಬಂಧ ಆದೇಶ ಹೊರಡಿಸಬೇಕು ಎಂದು ಪಟ್ಟು ಹಿಡಿದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ ಪೊಲೀಸರು ಹೋರಾಟಗಾರರನ್ನು ಮಾರ್ಗ ಮಧ್ಯೆ ತಡೆದು ಸ್ವಾತಂತ್ರ ಉದ್ಯಾನವನಕ್ಕೆ ಕರೆದೊಯ್ದರು. ಕರ್ನಾಟಕ ಸಂಘವು ಸಂಘಟಿಸಿದ್ದ ಮದ್ಯ ನಿಷೇಧ ಆಂದೋಲನದಲ್ಲಿ ಹಿರಿಯ, ಕಿರಿಯ ಮಹಿಳೆಯರು, ಪುರುಷರು ಪಾಲ್ಗೊಂಡು ಸರಕಾರ ಈ ಸಂಬಂಧ ದಿಟ್ಟವಾದ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
Next Story