ಪದ್ಮಶ್ರೀ ಸಾಲುಮರದ ತಿಮ್ಮಕ್ಕನ ಆಶೀರ್ವಾದ!
ಸಹಸ್ರಾರು ಗಿಡಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಬೆಳೆಸುವ ಮೂಲಕ ‘ವೃಕ್ಷಮಾತೆ’ಎಂದೇ ಹೆಸರಾಗಿರುವ ಕರ್ನಾಟಕದ ಸಾಲುಮರದ ತಿಮ್ಮಕ್ಕ (106) ಶನಿವಾರ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಹಣೆಯನ್ನು ಸ್ಪರ್ಶಿಸಿ ಆಶೀರ್ವದಿಸಿದ್ದು, ನೆರೆದಿದ್ದ ಗಣ್ಯರ ಗಮನವನ್ನು ಸೆಳೆಯಿತು. ರಾಷ್ಟ್ರಪತಿ ಭವನದ ಕಟ್ಟುನಿಟ್ಟಿನ ಶಿಷ್ಟಾಚಾರವು ತಿಮ್ಮಕ್ಕನವರ ಈ ವಾತ್ಸಲ್ಯಮಯಿ ನಡೆಗೆ ಅಡ್ಡಿಯಾಗಲಿಲ್ಲ.
Next Story