ಮಂಗಳೂರಿನಲ್ಲಿ ಕ್ರಿಕೆಟಿಗ ಹರ್ಭಜನ್ ಸಿಂಗ್
ನಗರದ ಟಿ.ಎಂ.ಎ. ಪೈ ಹಾಲ್ ನಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಭಾರತ ಕ್ರಿಕೆಟ್ ತಂಡದ ಆಟಗಾರ, 'ಟರ್ಬನೇಟರ್' ಹರ್ಭಜನ್ ಸಿಂಗ್ ಮಂಗಳೂರಿಗೆ ಆಗಮಿಸಿದ್ದರು. 'ವಿಶ್ವಾಸ್ ಬಾವಾ ಬಿಲ್ಡರ್ಸ್'ನ ಆಡಳಿತ ನಿರ್ದೇಶಕ ಅಬ್ದುರ್ರವೂಫ್ ಪುತ್ತಿಗೆಯವರ ಪುತ್ರ ಫತೇ ಮುಹಮ್ಮದ್ ಪುತ್ತಿಗೆ ಹಾಗೂ 'ಗ್ರೀನ್ ವ್ಯಾಲಿ' ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಆಡಳಿತ ಟ್ರಸ್ಟಿ ಸೈಯದ್ ಅಬ್ದುಲ್ ಖಾದರ್ ಬಾಶು ಅವರ ಪುತ್ರಿ ರಯ್ಯಾನ್ ಸೈಯದ್ ರ ವಿವಾಹ ಸಮಾರಂಭವು ನಗರದ ಟಿ.ಎಂ.ಎ. ಪೈ ಹಾಲ್ ನಲ್ಲಿ ಇಂದು ನೆರವೇರಿತು. ಇದೇ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ 'ಭಜ್ಜಿ' ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಕಡುನೀಲಿ ಬಣ್ಣದ ಸೂಟ್ ಹಾಗೂ ಹಳದಿ ಪೇಟ ಧರಿಸಿದ್ದ ಹರ್ಭಜನ್ ಸಿಂಗ್ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು.
Next Story