ಎ.28 ‘ತಾಜುಲ್ ಫುಖಹಾಅ್ ಮದ್ರಸ’ ಕಟ್ಟಡ ಉದ್ಘಾಟನೆ
ಮಂಗಳೂರು, ಎ.26: ಬುಖಾರಿ ಎಜುಕೇಶನಲ್ ಚಾರಿಟಿ ಸೆಂಟರ್ ಕಿನ್ಯ ಇದರ ಅಧೀನದ ಕೂಡಾರ ಗೌಸೀಯ ನಗರದಲ್ಲಿ ನೂತನವಾಗಿ ನಿರ್ಮಿಸಿದ ಮದ್ರಸ ಕಟ್ಟಡವನ್ನು ಎ.28ರಂದು ಬೆಳಗ್ಗೆ 8ಕ್ಕೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಸೈಯದ್ ಕೆ.ಎಸ್. ಆಟಕೋಯ ತಂಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ.
ಅಂದು ಸಂಜೆ 5ಕ್ಕೆ ಪೊಸೋಟ್ ಮಳ್ಹರ್ ವಿದ್ಯಾ ಸಮುಚ್ಚಯದ ಪ್ರಧಾನ ಕಾರ್ಯದರ್ಶಿ ಸೈಯದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ತಂಳ್ ನೇತೃತ್ವದಲ್ಲಿ ನಡೆಯಲಿರುವ ಸುನ್ನಿ ಸಂಗಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಸೈಯದ್ ಅಲವಿ ತಂಳ್ ದುಆಗೈಯ್ಯುವರು. ಬುಖಾರಿ ಎಜುಕೇಶನಲ್ ಚಾರಿಟಿ ಸೆಂಟರ್ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಅಧ್ಯಕ್ಷತೆ ಯಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡುವರು.
ಕಿನ್ಯ ದರ್ಸ್ನಲ್ಲಿ ಧಾರ್ಮಿಕ ಶಿಕ್ಷಣ ಪಡೆದು ಖಾಝಿ ಸ್ಥಾನದ ಜವಾಬ್ದಾರಿ ನಿರ್ವಹಿಸಿದ ಮರ್ಹೂಂ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ರ ಸ್ಮರಣಾರ್ಥ ಕೂಡಾರದಲ್ಲಿ ‘ತಾಜುಲ್ ಫುಖಹಾಅ್ ಮದ್ರಸ’ ಕಾರ್ಯಾಚರಿಸಲಿದೆ ಎಂದು ಸೆಂಟರ್ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಇಸ್ಮಾಈಲ್ ಸಅದಿ ಕಿನ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.