ಬೆಂಗಳೂರು: ಆ.25 ರಿಂದ 'ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸಿ ಮೇಳ'
ಬೆಂಗಳೂರು, ಆ.13: ರಾಜ್ಯ ಪ್ರವಾಸೋದ್ಯಮ ಇಲಾಖೆಯು ಆ.25 ರಿಂದ 27ರ ವರೆಗೆ ನಗರದ ದಿ ಲಲಿತ್ ಅಶೋಕ್ ನಲ್ಲಿ ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸಿ ಮೇಳ - 2019 ಆಯೋಜಿಸಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಆ.25 ರಂದು ಮೇಳವನ್ನು ಉದ್ಘಾಟಿಸಲಿದ್ದಾರೆ.
ವ್ಯಾವಹಾರಿಕ ಸಭೆಗಳ ಆಧಾರಿತ ಈ ಮೇಳದಲ್ಲಿ 250 ರಾಷ್ಟ್ರೀಯ ಹಾಗೂ 150 ಅಂತಾರಾಷ್ಟ್ರೀಯ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೆ ಎನ್ ರಮೇಶ್ ಅವರು ತಿಳಿಸಿದ್ದಾರೆ.
Next Story