ನಿಷೇಧಾಜ್ಞೆ ಉಲ್ಲಂಘನೆ: ಬಿಜೆಪಿ ನಾಯಕಿ ಪಂಕಜಾ ಮುಂಧೆ ವಿರುದ್ಧ ಪ್ರಕರಣ
ಔರಂಗಾಬಾದ್ (ಮಹಾರಾಷ್ಟ್ರ),ಅ.27: ಬೀಡ್ ಜಿಲ್ಲೆಯ ಸಾವರಗಾಂವ್ನಲ್ಲಿ ರ್ಯಾಲಿ ಸಂದರ್ಭದಲ್ಲಿ ನಿಷೇಧಾಜ್ಞೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ ನಾಯಕಿ ಪಂಕಜಾ ಮುಂಧೆ ಮತ್ತು ಇತರ 40-50 ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಅ.25ರಂದು ಸಾವರಗಾಂವ್ನ ಭಗವಾನ್ ಭಕ್ತಿ ಗಡಕ್ಕೆ ಭೇಟಿ ನೀಡಿದ್ದ ಮುಂಧೆ ಅಲ್ಲಿಂದ ಆನ್ಲೈನ್ ದಸರಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು.
ಜಿಲ್ಲೆಯಲ್ಲಿ ನಿಷೇಧಾಜ್ಞೆ ಚಾಲ್ತಿಯಲ್ಲಿತ್ತು ಮತ್ತು ಕೇವಲ ಐವರ ಉಪಸ್ಥಿತಿಗೆ ಮಾತ್ರ ಅನುಮತಿ ನೀಡಲಾಗಿತ್ತು. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
Next Story