ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
ಪಡುಬಿದ್ರಿ, ಅ. 27: ಪಡುಬಿದ್ರಿ ವಿನಾಯಕ ಏಜೆನ್ಸಿಯಲ್ಲಿ ಸೇಲ್ಸ್ಮೆನ್ ಆಗಿದ್ದು, ಅ.17ರಂದು ಬೆಳಗ್ಗೆ ನಡ್ಸಾಲು ಗ್ರಾಮದ ತಮ್ಮ ಮನೆಯಿಂದ ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಜಗದೀಶ್ ಆಚಾರ್ಯ (58) ಎಂಬವರ ಮೃತದೇಹ ಸೋಮವಾರ ತೆಂಕ ಎರ್ಮಾಳ್ ಗ್ರಾಮದ ಕರಾವಳಿ ತೀರದ ರೆಸಾರ್ಟ್ ಬಳಿಯ ಸಮುದ್ರ ತಡೆಗೋಡೆ ಮಧ್ಯೆ ಪತ್ತೆಯಾಗಿದೆ.
ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ಜಗದೀಶ್ ಆಚಾರ್ಯರು, ವಿಪರೀತ ಸಾಲ ಮಾಡಿಕೊಂಡು ಹಣಕಾಸಿನ ಸಮಸ್ಯೆಗೆ ಸಿಲುಕಿದ್ದು, ಇದರಿಂದ ಬೇಸೆತ್ತು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story