ಕನ್ನಡ ರಾಜ್ಯೋತ್ಸವ: ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕೆ ಡಿಸಿಎಂ, ಸಚಿವರ ನಿಯೋಜನೆ
ಬೆಂಗಳೂರು, ಅ. 28: ಕನ್ನಡ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ನವೆಂಬರ್ 1ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿಸಲು ಉಪಮುಖ್ಯಮಂತ್ರಿ ಮತ್ತು ಸಚಿವರನ್ನು ನಿಯೋಜನೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಮುಹಮ್ಮದ್ ನಯೀಮ್ ಮೊಮಿನ್ ಆದೇಶ ಹೊರಡಿಸಿದ್ದಾರೆ.
ಬಾಗಲಕೋಟೆ-ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಮನಗರ-ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ರಾಯಚೂರು-ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಿವಮೊಗ್ಗ- ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಬೆಂಗಳೂರು ಗ್ರಾಮಾಂತರ-ಕಂದಾಯ ಸಚಿವ ಆರ್.ಅಶೋಕ್, ಧಾರವಾಡ-ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಚಿತ್ರದುರ್ಗ-ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು.
ಚಾಮರಾಜನಗರ- ಸುರೇಶ್ ಕುಮಾರ್, ಕೊಡಗು-ವಿ.ಸೋಮಣ್ಣ, ಚಿಕ್ಕಮಗಳೂರು- ಸಿ.ಟಿ.ರವಿ, ಹಾವೇರಿ- ಬಸವರಾಜ ಬೊಮ್ಮಾಯಿ, ದಕ್ಷಿಣ ಕನ್ನಡ-ಕೋಟ ಶ್ರೀನಿವಾಸ ಪೂಜಾರಿ, ತುಮಕೂರು-ಜೆ.ಸಿ.ಮಾಧುಸ್ವಾಮಿ, ಗದಗ-ಸಿ.ಸಿ.ಪಾಟೀಲ್, ಕೋಲಾರ- ಎಚ್.ನಾಗೇಶ್, ಬೀದರ್- ಪ್ರಭು ಚೌವ್ಹಾಣ್, ವಿಜಯಪುರ- ಶಶಿಕಲಾ ಜೊಲ್ಲೆ, ಬಳ್ಳಾರಿ-ಆನಂದ್ ಸಿಂಗ್, ದಾವಣಗೆರೆ-ಬಿ.ಎ.ಬಸವರಾಜು(ಬೈರತಿ), ಮೈಸೂರು-ಎಸ್.ಟಿ.ಸೋಮಶೇಖರ್, ಕೊಪ್ಪಳ-ಬಿ.ಸಿ.ಪಾಟೀಲ್, ಚಿಕ್ಕಬಳ್ಳಾಪುರ-ಡಾ.ಕೆ.ಸುಧಾಕರ್, ಮಂಡ್ಯ-ಕೆ.ಸಿ.ನಾರಾಯಣಗೌಡ, ಉತ್ತರ ಕನ್ನಡ-ಶಿವರಾಂ ಹೆಬ್ಬಾರ್, ಬೆಳಗಾವಿ- ರಮೇಶ್ ಜಾರಕಿಹೊಳಿ, ಹಾಸನ- ಕೆ.ಗೋಪಾಲಯ್ಯ, ಕಲಬುರಗಿ-ಶ್ರೀಮಂತ ಪಾಟೀಲ್, ಉಡುಪಿ ಮತ್ತು ಯಾದಗಿರಿಯಲ್ಲಿ ಆಯಾ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಲಿದ್ದಾರೆ.
ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಒಪ್ಪಿಗೆ ಪಡೆದು ರಾಜ್ಯೋತ್ಸವ ಧ್ವಜಾರೋಹಣಕ್ಕೆ ಸಚಿವರನ್ನು ನಿಯೋಜನೆ ಮಾಡಲಾಗಿದೆ. ಅನಾರೋಗ್ಯ ಮತ್ತು ಇತರೆ ಕಾರಣಗಳಿಂದ ಸಚಿವರು ಅನುಪಸ್ಥಿತಿಯಲ್ಲಿ ಆಯಾ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲು ಸೂಚನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.