ಬಂಗಾಳ ಕೊಲ್ಲಿ ಸಮುದ್ರದಲ್ಲಿ ಚಂಡಮಾರುತ : ನ.26ರಂದು ರೈಲು ಸೇವೆ ಸಂಪೂರ್ಣ ಸ್ಥಗಿತ
ಮಂಗಳೂರು, ನ.25: ಬಂಗಾಳ ಕೊಲ್ಲಿ ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ನಿವಾರ್ ಚಂಡಮಾರುತ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಹಲವು ರೈಲುಗಳನ್ನು ಸಂಪೂರ್ಣ ಸ್ಥಗಿತಗೊಳಿಸಿದೆ.
ನ.26ರಂದು ತಿರುವನಂತಪುರಂನಿಂದ ಚೆನ್ನೈ ಸೆಂಟ್ರಲ್ಗೆ ತೆರಳುವ ಸ್ಪೇಷಲ್ ರೈಲನ್ನು (ಟ್ರೇನ್ ನಂ.02624) ಸಂಪೂರ್ಣ ಸ್ಥಗಿತಗೊಂಡಿದೆ. ಅಲ್ಲದೆ, ಅಲಪ್ಪುಝನಿಂದ ಚೆನ್ನೈ ಸೆಂಟ್ರಲ್ಗೆ ಪ್ರಯಾಣಿಸುವ ಸ್ಪೇಷಲ್ ರೈಲನ್ನು (02640) ಕೂಡ ಸಂಪೂರ್ಣವಾಗಿ ರದ್ದುಗೊಂಡಿದೆ ಎಂದು ರೈಲ್ವೆ ಪ್ರಕಟನೆ ತಿಳಿಸಿದೆ.
Next Story