ರಮೇಶ ದಾತೆ
ಮಂಗಳೂರು, ಡಿ.29: ಚಿತ್ಪಾವನ ಸಂಘದ ಮಾಜಿ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಕೆ.ಎ.ರಮೇಶ ಹೆಬ್ಬಾರ ದಾತೆ (74) ಶನಿವಾರ ಕೊಟೆಕಾರು ಮಾಡೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೂಲತ: ಬೆಳ್ತಂಗಡಿ ಅಗಳಿಯವರಾದ ದಾತೆ ಮೂರು ದಶಕ ಗಳ ಕಾಲ ದ.ಕ.ಜಿಲ್ಲಾ ಕೃಷಿಕರ ಸಹಕಾರಿ ಮಾರುಕಟ್ಟೆಯಲ್ಲಿ ಸೇವೆ ಸಲ್ಲಿಸಿದ್ದರು. ಮಂಕು ತಿಮ್ಮನ ಕಗ್ಗದ ವ್ಯಾಖ್ಯಾನಗಳನ್ನು ಹಲವಾರು ಸಂಸ್ಥೆಗಳಲ್ಲಿ ನಡೆಸಿ ಜನಪ್ರಿಯರಾಗಿದ್ದರು.
Next Story