ಸಿಡ್ನಿ ಟೆಸ್ಟ್ : ಭಾರತ ಕ್ರಿಕೆಟ್ ತಂಡದಿಂದ ಪ್ರತಿಹೋರಾಟ
ಸಿಡ್ನಿ: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಕೊನೆಯ ದಿನ, ಸೋಲು ತಪ್ಪಿಸಿಕೊಳ್ಳಲು ಭಾರತ ದಿಟ್ಟ ಪ್ರತಿಹೋರಾಟ ನಡೆಸುತ್ತಿದೆ.
ರವಿವಾರದ ಮೊತ್ತಕ್ಕೆ ಕೇವಲ ಆರು ರನ್ ಸೇರಿಸುವಷ್ಟರಲ್ಲಿ ನಾಯಕ ಅಜಿಂಕ್ಯ ರಹಾನೆ ಅವರ ವಿಕೆಟ್ ಕಳೆದುಕೊಂಡರೂ, ಚೇತೇಶ್ವರ ಪೂಜಾರ ಮತ್ತು ರಿಷಭ್ ಪಂತ್ ಅವರ ದಿಟ್ಟ ಹೋರಾಟದಿಂದಾಗಿ ಭಾರತ ಅಸಾಧ್ಯ ಗುರಿಯನ್ನು ಬೆನ್ನಟ್ಟಿದೆ. ಗೆಲುವಿಗೆ 407 ರನ್ ಗಳಿಸಬೇಕಾಗಿರುವ ಭಾರತ ಇತ್ತೀಚಿನ ವರದಿಗಳು ಬಂದಾಗ 3 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತ್ತು. ಗೆಲುವಿಗೆ ಇನ್ನೂ 172 ರನ್ ಅಗತ್ಯವಿದೆ.
ಇದಕ್ಕೂ ಮುನ್ನ ಕೇವಲ 4 ರನ್ ಗಳಿಸಿದ್ದ ರಹಾನೆ ಲಿಯಾನ್ ಬೌಲಿಂಗ್ನಲ್ಲಿ ವೇಡ್ಗೆ ಕ್ಯಾಚ್ ನೀಡಿ ಔಟ್ ಆದರು. ಆಸ್ಟ್ರೇಲಿಯಾ ಪರ ಹೇಸಲ್ವುಡ್, ಕಮಿನ್ಸ್ ಮತ್ತು ಲಿಯಾನ್ ತಲಾ ಒಂದು ವಿಕೆಟ್ ಹಂಚಿಕೊಂಡರು.
Next Story