ಅಶಿಸ್ತಿನ ವರ್ತನೆ: ದೀಪಕ್ ಹೂಡಾ ಅಮಾನತು
ಮುಂಬೈ,ಜ.22: ಅಶಿಸ್ತಿನಿಂದ ವರ್ತಿಸಿರುವ ಕಾರಣಕ್ಕೆ ಆಲ್ರೌಂಡರ್ ದೀಪಕ್ ಹೂಡಾರನ್ನು ಉಳಿದಿರುವ ದೇಶೀಯ ಋತುವಿನಿಂದ ಬರೋಡ ತಂಡ ಅಮಾನತುಗೊಳಿಸಿದೆ. ಬರೋಡ ಕ್ರಿಕೆಟ್ ಸಂಸ್ಥೆಯ ಅಪೆಕ್ಸ್ ಕೌನ್ಸಿಲ್ ಈ ನಿರ್ಧಾರ ತೆಗೆದು ಕೊಂಡಿದೆ.
ಇತ್ತೀಚೆಗೆ ಬರೋಡದ ನಾಯಕ ಕೃನಾಲ್ ಪಾಂಡ್ಯ ಅವರೊಂದಿಗೆ ವಾಗ್ವಾದ ನಡೆಸಿದ್ದ ದೀಪಕ್ ಹೂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಆರಂಭಕ್ಕೆ ಮೊದಲೇ ತಂಡದ ಶಿಬಿರವನ್ನು ತೊರೆದಿದ್ದರು.
ದೀಪಕ್ ಕ್ರೀಡೆಗೆ ಹಾಗೂ ಸಂಸ್ಥೆಗೆ ಅಗೌರವ ತೋರಿರುವ ಕಾರಣ ಅವರನ್ನು ಇಡೀ ದೇಶೀಯ ಋತುವಿನಿಂದ ಅಮಾನತುಗೊಳಿಸಲು ನಿರ್ಧರಿಸಲಾಗಿದೆ ಎಂದು ಬಿಸಿಎ ಕಾರ್ಯದರ್ಶಿ ಅಜಿತ್ ಲೆಲೆ ತಿಳಿಸಿದ್ದಾರೆ.
Next Story