ಮಂಗಳೂರು: ಉರುಳಿಬಿದ್ದ ಬೃಹತ್ ಆಲದಮರ; 3 ವಾಹನಗಳು ಜಖಂ
ಮಂಗಳೂರು, ಜ.24: ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನದ ಎದರುಗಡೆಯಿರುವ ಬೃಹತ್ ಅಶ್ವಥ ಮರವೊಂದು ಇಂದು ಬೆಳಗ್ಗೆ ಉರುಳಿ ಬಿದ್ದಿದೆ. ಈ ವೇಳೆ ಅದರಡಿಗೆ ಸಿಲುಕಿ ಮೂರು ವಾಹನಗಳು ಜಖಂಗೊಂಡಿವೆ.
ಇಂದು ಬೆಳಗ್ಗೆ 8:10ರ ಸುಮಾರಿಗೆ ಕಾರ್ ಸ್ಟ್ರೀಟ್ ಸಮೀಪದ ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯ ಕಟ್ಟೆಯಲ್ಲಿದ್ದ ಸುಮಾರು 80 ವರ್ಷ ಹಳೆಯ ಆಲದಮರ ಏಕಾಏಕಿ ಉರುಳಿಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಒಂದು ನೀರು ಸಾಗಾಟದ ಟ್ಯಾಂಕರ್, ಒಂದು ಕಾರು ಹಾಗೂ ಕ್ರೇನ್ ವೊಂದು ಅದರಡಿಗೆ ಸಿಲುಕಿ ಜಖಂಗೊಂಡಿದೆ ಎಂದು ತಿಳಿದುಬಂದಿದೆ.
ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ ಎಂದು ಹೇಳಲಾಗಿದೆ.