ಲಾರಿಗಳಿಂದ ಬ್ಯಾಟರಿ ಕಳವು ಪ್ರಕರಣ: ಆರೋಪಿ ಸೆರೆ
ಮಂಗಳೂರು, ಜ.24: ನಗರದ ಪಣಂಬೂರು ಎನ್ಎಂಪಿಟಿ ಯಾರ್ಡ್ನಲ್ಲಿ ಪಾರ್ಕ್ ಮಾಡಿದ್ದ ಐದು ಲಾರಿಗಳಿಂದ ಬ್ಯಾಟರಿ ಕಳವು ಮಾಡಿದ್ದ ಪ್ರಕರಣದ ಆರೋಪಿಯನ್ನು ಪಣಂಬೂರು ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಬಜಾಲ್ ನಿವಾಸಿ ಎ.ಎಂ. ಇರ್ಫಾನ್ ಯಾನೆ ಇರ್ಫಾನ್(25) ಬಂಧಿತ ಆರೋಪಿ.
ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಕಳವು ಮಾಡಿದ ಬ್ಯಾಟರಿ ಸೇರಿದಂತೆ ಸುಮಾರು 85,000 ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶ್ರೀ ಗಣೇಶ್ ಶಿಪ್ಪಿಂಗ್ ಏಜೆನ್ಸಿ ಸಂಸ್ಥೆಯ ಮ್ಯಾನೇಜರ್ ತಮ್ಮ ಸಂಸ್ಥೆಯ ಲಾರಿಗಳನ್ನು ಪಣಂಬೂರು ಎನ್ಎಂಪಿಟಿ ಯಾರ್ಡ್ನಲ್ಲಿ ಪಾರ್ಕ್ ಮಾಡುತ್ತಿದ್ದರು. ಜ.9ರಂದು ಯಾರ್ಡ್ನಲ್ಲಿ ನಿಲ್ಲಿಸಿದ್ದ 5 ಲಾರಿಗಳಿಂದ ಬ್ಯಾಟರಿ ಕಳವು ಮಾಡಲಾಗಿತ್ತು. ಈ ಕುರಿಂತೆ ಅವರು ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
Next Story