ಟೂಲ್ಕಿಟ್ ಪ್ರಕರಣ: ನಿಖಿತಾ ಜೇಕಬ್, ಶಂತನು ವಿಚಾರಣೆ
ಶಂತನು
ಹೊಸದಿಲ್ಲಿ, ಫೆ. 22: ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯವಾದಿ ನಿಖಿತಾ ಜೇಕಬ್ ಹಾಗೂ ಇಂಜಿನಿಯರ್ ಶಂತನು ಮುಲುಕ್ ಅವರು ಸೋಮವಾರ ತನಿಖೆಯಲ್ಲಿ ಭಾಗಿಯಾಗಿದ್ದಾರೆ. ದ್ವಾರಕಾದಲ್ಲಿರುವ ದಿಲ್ಲಿ ಪೊಲೀಸ್ನ ಸೈಬರ್ ಸೆಲ್ ಕಚೇರಿಯಲ್ಲಿ ವಿಚಾರಣೆ ನಡೆಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಹಂಚಿಕೊಂಡ ರೈತರ ಪ್ರತಿಭಟನೆ ಬೆಂಬಲಿಸುವ ‘ಟೂಲ್ಕಿಟ್ ಗೂಗಲ್ ಡಾಕ್’ ಕುರಿತು ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸರು ಬೆಂಗಳೂರು ಮೂಲದ ದಿಶಾ ರವಿ ಅವರನ್ನು ಬಂಧಿಸಿದ್ದರು. ಆದರೆ, ನಿಖಿತಾ ಜೇಕಬ್ ಹಾಗೂ ಶಂತನು ಮುಲುಕ್ಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿತ್ತು.
‘‘ಜೇಕಬ್ ಹಾಗೂ ಮುಲುಕ್ಗೆ ತನಿಖೆಗೆ ಹಾಜರಾಗುವಂತೆ ನೋಟಿಸು ಜಾರಿ ಮಾಡಲಾಗಿತ್ತು. ಪ್ರಸ್ತುತ ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ’’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story