ಯುನಿವೆಫ್ ಸದಸ್ಯತ್ವ ಅಭಿಯಾನದ ಅಂಗವಾಗಿ 'ಯುವ ಮಿಲನ ವಿಚಾರ ಮಂಥನ'
ಮಂಗಳೂರು : ಯುನಿವೆಫ್ ಕರ್ನಾಟಕ 2021ರ ಫೆ. 26 ರಿಂದ ಎಪ್ರಿಲ್ 2 ರ ತನಕ "ಬದಲಾವಣೆಗಾಗಿ ನಾನು" ಎಂಬ ಶೀರ್ಷಿಕೆಯಲ್ಲಿ ಹಮ್ಮಿಕೊಂಡಿರುವ "ಸದಸ್ಯತ್ವ ಅಭಿಯಾನ" ದ ಅಂಗವಾಗಿ ಮಂಗಳೂರು ವಲಯವನ್ನು ಕೇಂದ್ರೀಕರಿಸಿ ಫೆ. 26ರ ರಾತ್ರಿ 8 ಗಂಟೆಗೆ ಫಳ್ನೀರ್ ನ ದಾರುಲ್ ಇಲ್ಮ್ ನ ಅಲ್ ವಹ್ದಃ ದಲ್ಲಿ "ಯುವ ಮಿಲನ ವಿಚಾರ ಮಂಥನ" ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಪ್ರಸಕ್ತ ಪರಿಸ್ಥಿತಿಯಲ್ಲಿ ನಮ್ಮ ಹೊಣೆಗಾರಿಕೆಗಳೇನು ? ಪರಿಸ್ಥಿತಿಯ ಸುಧಾರಣೆಯಲ್ಲಿ ನಮ್ಮ ಪಾತ್ರವೇನು? ಸಮುದಾಯದ ಸಬಲೀಕರಣದಲ್ಲಿ ನಾವು ನಿರ್ವಹಿಸಬೇಕಾದ ಹೊಣೆಗಾರಿಕೆಗಳೇನು ? ಮುಂತಾದ ಎಲ್ಲ ವಿಚಾರಗಳ ಚರ್ಚೆಗಳು ಇದರಲ್ಲಿ ನಡೆಯಲಿದ್ದು , ಯುವಕರನ್ನು ಅದರಲ್ಲೂ ಮಂಗಳೂರು ಪರಿಸರದ ಯುವಕರನ್ನು ಇದಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿದೆ. ಆಸಕ್ತರು ಸಂಚಾಲಕ ಹುದೈಫ್ ಕುದ್ರೋಳಿ ಅವರನ್ನು ಮೊ. 9964129116 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story