ಶ್ರೀನಗರ: ಶಂಕಿತ ಉಗ್ರರ ಗುಂಡಿಗೆ ತುತ್ತಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕ ಸಾವು
ಶ್ರೀನಗರ: ಶಂಕಿತ ಭಯೋತ್ಪಾದಕರಿಂದ ಫೆಬ್ರವರಿ 17ರಂದು ಗುಂಡಿನ ದಾಳಿಗೆ ತುತ್ತಾಗಿದ್ದ ಇಲ್ಲಿನ ಜನಪ್ರಿಯ ಉಪಹಾರ ಗೃಹದ ಮಾಲಕನ ಪುತ್ರ ಶ್ರೀನಗರದ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟಿದ್ದಾರೆ.
ಶಂಕಿತ ಭಯೋತ್ಪಾದಕರು ತೀರಾ ಸಮೀಪದಿಂದ ಅಕಾಶ್ ಮೆಹ್ರಾ ಅವರಿಗೆ ಗುಂಡು ಹಾರಿಸಿದ್ದರು. ಇದರಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಇಲ್ಲಿನ ಎಸ್ಎಂಎಚ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿ 1990ರಿಂದ ಸಕ್ರಿಯವಾಗಿರುವ ಜಾನ್ಬಾಝ್ ಪಡೆ ಈ ದಾಳಿಯ ಹೊಣೆ ಹೊತ್ತಿದೆ ಎಂದು ಅವರು ತಿಳಿಸಿದ್ದಾರೆ.
Next Story