ಹಗರಣ ಮಾಡಿದ ತೋಳಗಳಿಂದಲೇ ಮುಖವಾಡ ಧರಿಸಿ ಹಗರಣ ಬಯಲಿಗೆಳೆಯುವ ಮಹಾನಾಟಕ: ಕಾಂಗ್ರೆಸ್ ಕಿಡಿ
''ಶಾಸಕ ಸತೀಶ್ ರೆಡ್ಡಿ, ಎಳೆಸಂಸದನನ್ನು ಕೂಡಲೇ ಬಂಧಿಸಿ''
ಬೆಂಗಳೂರು, ಮೇ 6: ಚಿತೆಯಲ್ಲಿ ಚಳಿ ಕಾಯಿಸುವ ನೀಚತನ ಇರುವುದು ಬಿಜೆಪಿಗೆ ಮಾತ್ರ. ಕಳೆದ ಭಾರಿ ಬೆಡ್ ಖರೀದಿ ಹಗರಣ, ಈ ಭಾರಿ ಬೆಡ್ ಬ್ಲಾಕಿಂಗ್ ಹಗರಣ ಎಂದು ರಾಜ್ಯ ಸರಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.
''ಹಗರಣ ಮಾಡಿದ ತೋಳಗಳೇ ಮೊಲಗಳಂತೆ ಮುಖವಾಡ ಧರಿಸಿ ಹಗರಣ ಬಯಲಿಗೆಳೆಯುವ ಮಹಾನಾಟಕ ಮಾಡಿದ್ದವು! ತಮ್ಮ ಭ್ರಷ್ಟಾಚಾರ ಮರೆಮಾಚಲು ಕೋಮು ಬಣ್ಣ ಲೇಪಿಸಲು ಯತ್ನಿಸಿದ ಕುತಂತ್ರ ಬೆತ್ತಲಾಗಿದೆ. ಶಾಸಕ ಸತೀಶ್ ರೆಡ್ಡಿಯನ್ನ ಬಂಧಿಸಿ ಎಂದು ಒತ್ತಾಯಿಸಿದೆ.
"ಬಿಜೆಪಿ ಕೊರೋನಗಿಂತಲೂ ಭೀಕರ ವೈರಸ್. ಜನ ನರಳಿ ನರಳಿ ಸಾಯುತ್ತಿದ್ದಾರೆ, ಬಿಬಿಎಂಪಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ತಾವೇ ಕಿಂಗ್ ಪಿನ್ಗಳಾಗಿ, ತಾವೇ ಹಗರಣ ಬಯಲಿಗೆಳೆಯುವ ನಾಟಕವಾಡಿ ಅದಕ್ಕೆ ಕೋಮುಬಣ್ಣ ಲೇಪಿಸಿದ "ಮಹಾನಾಟಕ" ಬಯಲಾಗಿದೆ. ತಮ್ಮ ಭ್ರಷ್ಟಾಚಾರ ಹಾಗೂ ವೈಫಲ್ಯ ಮರೆಮಾಚಲು ನಡೆಸಿದ ಕುತಂತ್ರ ಬೆತ್ತಲಾಗಿದೆ ಎಂದು ಟೀಕಿಸದೆ.
ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸುವುದೆಂದರೆ ಇದೇ. ಬಿಜೆಪಿಗರೇ ಬೆಡ್ ಬ್ಲಾಕಿಂಗ್ ದಂಧೆಯ ರೂವಾರಿಗಳು, ಎಂಬ ಸತ್ಯ ಹೊರಬಂದಿದೆ. ವಾರ್ ರೂಮಿನಲ್ಲಿ ತಮ್ಮದೇ ಪಟಾಲಂ ಬಿಟ್ಟು ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ಶಾಸಕ ಸತೀಶ್ ರೆಡ್ಡಿ, ಅದಕ್ಕೆ ಸಹಕರಿಸಿದ ಎಳೆಸಂಸದನನ್ನು ಕೂಡಲೇ ಬಂಧಿಸಿ ಸಮಗ್ರ ತನಿಖೆ ನಡೆಸಬೇಕು ಕಾಂಗ್ರೆಸ್ ಟ್ವೀಟ್ ಮೂಲಕ ಒತ್ತಾಯಿಸಿದೆ.
ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸುವುದೆಂದರೆ ಇದೇ.
— Karnataka Congress (@INCKarnataka) May 6, 2021
ಬಿಜೆಪಿಗರೇ ಬೆಡ್ ಬ್ಲಾಕಿಂಗ್ ದಂಧೆಯ ರೂವಾರಿಗಳು, ಎಂಬ ಸತ್ಯ ಹೊರಬಂದಿದೆ.
ವಾರ್ ರೂಮಿನಲ್ಲಿ ತಮ್ಮದೇ ಪಟಾಲಂ ಬಿಟ್ಟು ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ಶಾಸಕ ಸತೀಶ್ ರೆಡ್ಡಿ, ಅದಕ್ಕೆ ಸಹಕರಿಸಿದ ಎಳೆಸಂಸದನನ್ನು ಕೂಡಲೇ ಬಂಧಿಸಿ ಸಮಗ್ರ ತನಿಖೆ ನಡೆಸಬೇಕು.#BJPexposed pic.twitter.com/yhwKaG5UCF