ರಸ್ತೆ ಅಪಘಾತ: ಬೈಕ್ ಸವಾರರಿಬ್ಬರು ಮೃತ್ಯು
ಮುಂಡಗೋಡ: ಬೋಲೆರೋ ಪಿಕ್ಅಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹುಬ್ಬಳ್ಳಿ-ಶಿರಸಿ ರಸ್ತೆಯ ಹುಡೇಲಕೊಪ್ಪ ಗ್ರಾಮ ಹತ್ತಿರ ಬುಧವಾರ ನಡೆದಿದೆ.
ರಾಜೇಶ ಚಲವಾದಿ(21) ಮತ್ತು ಶ್ರೀಕಾಂತ ವಡ್ಡರ ಮೃತಪಟ್ಟವರು.
ಬೋಲೆರೋ ಪಿಕ್ಅಪ್ ಶಿರಸಿ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟಿತ್ತು ಹಾಗೂ ಬೈಕ್ ಸವಾರರು ಮುಂಡಗೋಡದಿಂದ ಪಾಳಾ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪಿಎಸೈ ಬಸವರಾಜ ಮಬನೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ
Next Story