ಪುತ್ತೂರು: ಬೈಕ್ - ಓಮ್ನಿ ಕಾರು ಢಿಕ್ಕಿ; ಓರ್ವನಿಗೆ ಗಾಯ
ಪುತ್ತೂರು: ಬೈಕ್ ಮತ್ತು ಓಮ್ನಿ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಪುತ್ತೂರಿನ ಹೊರವಲಯ ಬನ್ನೂರಿನಲ್ಲಿ ನಡೆದಿದೆ.
ಬೆಳ್ಳಿಪ್ಪಾಡಿ ನಿವಾಸಿ ಮೋನಪ್ಪ ಗೌಡ ಎಂಬವರ ಪುತ್ರ ಧನಂಜಯ ಗೌಡ(29) ಗಾಯಗೊಂಡ ಬೈಕ್ ಸವಾರ. ಬನ್ನೂರಿನ ಆಯೋಧ್ಯಾನಗರದ ಶಿವಪಾರ್ವತಿ ಮಂದಿರ ಬಳಿ ಅಪಘಾತ ಸಂಭವಿಸಿದೆ.
ಗಾಯಾಳುವನ್ನು ಸ್ಥಳೀಯರಾದ ಹಂಝ ಮತ್ತು ರಫೀಕ್ ಬಾಂಬೆ ಎಂಬವರು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಹಕರಿಸಿದ್ದಾರೆ.
ವಿವೇಕಾನಂದ ಕಾಲೇಜು- ಪಡೀಲ್ ರಸ್ತೆಯಲ್ಲಿ ಧನಂಜಯರವರು ಬೈಕ್ ಚಲಾಯಿಸಿಕೊಂಡು ತೆರಳುತ್ತಿದ್ದ ವೇಳೆ ಬನ್ನೂರು ಶಿವಪಾರ್ವತಿ ಮಂದಿರದ ಬಳಿ ಮಾರುತಿ ಓಮ್ನಿಗೆ ಢಿಕ್ಕಿಯಾಗಿದೆ.
ಢಿಕ್ಕಿಯ ತೀವ್ರತೆಗೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಧನಂಜಯ ಅವರನ್ನು ಮಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ.
Next Story