varthabharthi


ಕರ್ನಾಟಕ

ವಂಚನೆ: ಶಾಸಕ ಮಹೇಶ್ ಹೆಸರು ಹೇಳಿ ಶಾಸಕಿ ರೂಪಾಲಿ ನಾಯ್ಕರಿಂದ ಹಣ ಪಡೆದ ಆರೋಪಿಯ ಸೆರೆ

ವಾರ್ತಾ ಭಾರತಿ : 20 Jul, 2021

ಚಾಮರಾಜನಗರ, ಜು.20: ಜಿಲ್ಲೆಯ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೆಸರು ಹೇಳಿ ಕಾರವಾರ ಶಾಸಕಿ ರೂಪಾಲಿ ನಾಯ್ಕರಿಂದ ಹಣ ಪಡೆದು ವಂಚಿಸಿದ ಆರೋಪದಲ್ಲಿ ಯುವಕನೋರ್ವನನ್ನು ಕೊಳ್ಳೇಗಾಲ ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಕನಕಪುರ ತಾಲೂಕಿನ ದೊಡ್ಡಮುದುವಾಡಿ ಗ್ರಾಮದ ಸಚಿನ್ ಗೌಡ (23) ಬಂಧಿತ ಆರೋಪಿ.

ಈತ, ತಾನು ಶಾಸಕ ಎನ್.ಮಹೇಶ್ ಅವರ ಆಪ್ತ ಸಹಾಯಕ ಎಂದು ಶಾಸಕಿ ರೂಪಾಲಿ ನಾಯ್ಕರಿಗೆ ದೂರವಾಣಿ ಕರೆ ಮಾಡಿ 50 ಸಾವಿರ ರೂ. ಕೇಳಿದ್ದಾನೆ. ಅದರಂತೆ ರೂಪಾಲಿ ನಾಯ್ಕ್ ಜು.1ರಂದು ಆರೋಪಿ ಬ್ಯಾಂಕ್ ಖಾತೆಗೆ  50 ಸಾವಿರ ರೂ. ಮಾಡಿದ್ದಾರೆ.

ಬಳಿಕ ಕಾರವಾರ ಶಾಸಕಿಯಿಂದ ಈ ವಿಚಾರ ತಿಳಿದ ಶಾಸಕ ಎನ್.ಮಹೇಶ್ ತನ್ನ ಆಪ್ತರಲ್ಲಿ ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ತಕ್ಷಣ ಶಾಸಕ ಮಹೇಶ್ ಈ ಬಗ್ಗೆ ತನ್ನ ಆಪ್ತ ಸಹಾಯಕ ಮಹದೇವಸ್ವಾಮಿ ಮೂಲಕ ಪಟ್ಟಣ ಪೊಲೀಸ್ ಠಾಣೆಗೆ  ದೂರು ನೀಡಿದ್ದರು.

ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಸಚಿನ್ ಗೌಡನನ್ನು ಕನಕಪುರದಲ್ಲಿ ಬಂಧಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)