ಕರಾವಳಿ
ಕೊಂಕಣ ರೈಲು ಸಂಚಾರ ಯಥಾಸ್ಥಿತಿಗೆ
ವಾರ್ತಾ ಭಾರತಿ : 20 Jul, 2021

ಹಳೆ ಗೋವಾ ಸುರಂಗದ ಕರ್ಮಾಲಿ ಹಾಗೂ ತೀಮಿಮ್ ನಿಲ್ದಾಣಗಳ ನಡುವೆ ಸೋಮವಾರ ಭಾರೀ ಮಳೆಯಿಂದ ರೈಲು ಹಳಿ ಮೇಲೆ ಬಿದ್ದಿದ್ದ ಮಣ್ಣನ್ನು ತೆರವು ಮಾಡಲಾಗಿದೆ.
ಉಡುಪಿ, ಜು.20: ಸೋಮವಾರ ಮುಂಜಾನೆಯಿಂದ ಗೋವಾ ರಾಜ್ಯದ ಹಳೆ ಗೋವಾ ಸುರಂಗದ ಕರ್ಮಾಲಿ ಹಾಗೂ ತೀಮಿಮ್ ನಿಲ್ದಾಣಗಳ ನಡುವೆ ಭಾರೀ ಮಳೆಯಿಂದ ರೈಲು ಹಳಿ ಮೇಲೆ ಬಿದ್ದಿದ್ದ ಕೆಸರು ಹಾಗೂ ನೀರನ್ನು ತೆರವುಗೊಳಿಸಿ ಹಳಿಯನ್ನು ಸಂಚಾರಕ್ಕೆ ಅಣಿಗೊಳಿಸಿದ್ದು, ಸೋಮವಾರ ರಾತ್ರಿ 10:30ರಿಂದ ರೈಲುಗಳು ಸಂಚಾರಕ್ಕೆ ತಾಂತ್ರಿಕ ಸಮಿತಿ ಹಸಿರು ನಿಶಾನೆ ತೋರಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟನೆ ತಿಳಿಸಿದೆ.
ಹೀಗಾಗಿ ಇಂದಿನಿಂದ ಕೊಂಕಣ ರೈಲು ಮಾರ್ಗದಲ್ಲಿ ಹೋಗುವ ಮತ್ತು ಬರುವ ರೈಲುಗಳ ಓಡಾಟ ಯಥಾಸ್ಥಿತಿಗೆ ಬಂದಿದೆ ಎಂದು ಪ್ರಕಟನೆ ತಿಳಿಸಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)










