ಪಾಂಬಾರು ಸುಬ್ಬಣ್ಣ ರೈ
ಪುತ್ತೂರು: ಹಿರಿಯ ಕಾಂಗ್ರೆಸ್ ಮುಖಂಡ, ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರು ನಿವಾಸಿ ಪಾಂಬಾರು ಸುಬ್ಬಣ್ಣ ರೈ ಹೃದಯಾಘಾತದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಅವರು ಕೊಳ್ತಿಗೆ ಗ್ರಾಮ ಪಂ. ಸದಸ್ಯರಾಗಿ, ಕೊಳ್ತಿಗೆ ಸಿ.ಎ. ಬ್ಯಾಂಕ್ ಸದಸ್ಯರಾಗಿ, ಪಾಂಬಾರು ಸತ್ಯ ಪೀಠದ ಸ್ಥಾಪಕ ಅಧ್ಯಕ್ಷರಾಗಿ, ಕೊಳ್ತಿಗೆ ಷಣ್ಮುಖ ದೇವ ಭಜನಾ ಮಂದಿರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್ ರೈ ಪಾಂಬಾರು ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ.
Next Story