ಸಚಿವ ಸ್ಥಾನ ವಂಚಿತ ಪ್ರಮುಖರು
ಬೆಂಗಳೂರು: ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ 29 ಶಾಸಕರ ಪಟ್ಟಿಯಲ್ಲಿ ಹಲವು ಪ್ರಮುಖರನ್ನು ಕೈ ಬಿಡಲಾಗಿದ್ದು, ಕೆಲವು ಹೊಸ ಮುಖಗಳು ಕೂಡ ಕಾಣಿಸಿಕೊಂಡಿದೆ.
ಬಿ.ಎಸ್ ವೈ ಅವರ ಸಂಪುಟದಲ್ಲಿ ಸಚಿವರಾಗಿದ್ದ 6 ಮಂದಿ ಹಾಗೂ ಮುಖ್ಯಮಂತ್ರಿ ರೇಸ್ ನಲ್ಲಿದ್ದ ಅರವಿಂದ ಬೆಲ್ಲದ್ ಅವರ ಹೆಸರು ಕೂಡ ನೂತನ ಸಚಿವರ ಪಟ್ಟಿಯಲ್ಲಿಲ್ಲ. ಇನ್ನು ಹೊನ್ನಾಳಿ ಕ್ಷೇತ್ರದ ಶಾಸಕ ರೇಣಿಕಾಚಾರ್ಯ, ಬಸನ ಗೌಡ ಪಾಟೀಲ್ ಯತ್ನಾಲ್ ಕೂಡ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.
ಸಚಿವ ಸ್ಥಾನದಿಂದ ವಂಚಿತರಾದ ಪ್ರಮುಖರು
ಸುರೇಶ್ ಕುಮಾರ್
ಅರವಿಂದ ಲಿಂಬಾವಳಿ
ಲಕ್ಷ್ಮಣ ಸವದಿ
ಸಿಪಿ ಯೋಗೇಶ್ವರ್
ಆರ್.ಶಂಕರ್
ಶ್ರೀಮಂತ ಪಾಟೀಲ್
ಅರವಿಂದ ಬೆಲ್ಲದ್
ಬಸನಗೌಡ ಪಾಟೀಲ್ ಯತ್ನಾಲ್
ರೇಣಿಕಾಚಾರ್ಯ
ಇನ್ನು ಮಾಜಿ ಸಚಿವ ಜಗದೀಶ್ ಶೆಟ್ಟರ್, 'ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಸೇರುವುದಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ' ಎಂದು ಈಗಾಗಲೇ ಸ್ಪಷ್ಟನೆ ನೀಡಿದ್ದರು.
ಟ್ವಿಟರ್ ನಲ್ಲಿ ಧನ್ಯವಾದ ತಿಳಿಸಿದ ಸುರೇಶ್ ಕುಮಾರ್
ಸಂಪುಟದಿಂದ ಹೊರಗುಳಿದ ಮಾಜಿ ಸಚಿವ ಸುರೇಶ್ ಕುಮಾರ್, 'ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು' ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ
— S.Suresh Kumar (@nimmasuresh) August 4, 2021
ನನ್ನ ಹೃತ್ಪೂರ್ವಕ ಧನ್ಯವಾದಗಳು