ಪ್ರತಿಭಟನಾಕಾರರ ಮೇಲಿನ 5,570 ಕೇಸ್ ಗಳನ್ನು ವಾಪಸ್ ಪಡೆದ ತಮಿಳುನಾಡು ಸರಕಾರ
2011 ರಿಂದ 2021 ರ ಅವಧಿಯಲ್ಲಿ ರಾಜ್ಯದ ವಿವಿಧ ಕಾನೂನುಗಳು ಮತ್ತು ಯೋಜನೆಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಿದ ಪ್ರತಿಭಟನಾಕಾರರ ವಿರುದ್ಧ 2011 ರಿಂದ 2021 ರವರೆಗೆ ದಾಖಲಾದ ಒಟ್ಟು 5,570 ಪ್ರಕರಣಗಳನ್ನು ವಾಪಸ್ ಪಡೆಯುವಂತೆ ತಮಿಳುನಾಡು ಸರಕಾರ ಆದೇಶ ಹೊರಡಿಸಿದೆ ಎಂದು livelaw ವರದಿ ಮಾಡಿದೆ.
ಹಿಂಪಡೆಯಲು ಆದೇಶಿಸಲಾದ ಪ್ರಕರಣಗಳಲ್ಲಿ 2020 ರ ಕೃಷಿ ಕಾನೂನುಗಳು, ರಾಷ್ಟ್ರೀಯ ನಾಗರಿಕರ ನೋಂದಣಿ (NRC), ಪೌರತ್ವ ತಿದ್ದುಪಡಿ ಕಾಯ್ದೆ (CAA), ಅಷ್ಟ ಪಥಗಳ ಚೆನ್ನೈ-ಸೇಲಂ ಎಕ್ಸ್ಪ್ರೆಸ್ವೇ ಯೋಜನೆ, ಮೀಥೇನ್ ಯೋಜನೆ, ನ್ಯೂಟ್ರಿನೊ ವೀಕ್ಷಣಾಲಯ ಯೋಜನೆ ಮತ್ತು ಕೂಡಂಕುಳಂ ಅಣು ವಿದ್ಯುತ್ ಸ್ಥಾವರ ಯೋಜನೆ ವಿರುದ್ಧ ಪ್ರತಿಭಟಿಸಿದವರ ಪ್ರಕರಣಗಳು ಸೇರಿವೆ.
ಸರ್ಕಾರದ ಆದೇಶವನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್ಕೆ ಪ್ರಭಾಕರ್ ಅವರು ಸಹಿ ಮಾಡಿದ್ದಾರೆ.
10.08.2021 ರ ಮಧ್ಯಂತರ ಆದೇಶದಲ್ಲಿ ಸುಪ್ರೀಂ ಕೋರ್ಟಿನ ಸೂಚನೆಗಳ ಪ್ರಕಾರ, ಸಿಟಿಂಗ್ ಅಥವಾ ಮಾಜಿ ಎಂಪಿ/ಎಂಎಲ್ಎ ವಿರುದ್ಧ ಯಾವುದೇ ಮೊಕದ್ದಮೆಯನ್ನು ಹೈಕೋರ್ಟ್ನ ಅನುಮತಿ ಇಲ್ಲದೆ ಹಿಂಪಡೆಯಬಾರದು ಎಂದು ಜಿಒ ಉಲ್ಲೇಖಿಸಿದೆ.
ಅಂತೆಯೇ, ಮದ್ರಾಸ್ನ ಹೈಕೋರ್ಟ್ನಲ್ಲಿ ಪ್ರಕರಣವನ್ನು ಕೈಗೆತ್ತಿಕೊಳ್ಳಲು, ಹಾಲಿ ಅಥವಾ ಮಾಜಿ ಸಂಸದರು/ಶಾಸಕರ ವಿರುದ್ಧದ ಪ್ರಕರಣಗಳ ವಿವರಗಳನ್ನು ಒದಗಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಯಿತು.