ದೇವಸ್ಯ ಸೇತುವೆಗೆ ಹಾನಿ: ವಾಹನ ಸಂಚಾರಕ್ಕೆ ನಿಷೇಧ
ಪುತ್ತೂರು: ಪುತ್ತೂರು-ಬೆಳಿಯೂರು ಕಟ್ಟೆ-ಪಾಣಾಜೆ ಸಂಪರ್ಕದ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರುಪಂಜ ದೇವಸ್ಯ ಹಳೆ ಸೇತುವೆಗೆ ಹಾನಿ ಉಂಟಾಗಿದ್ದು ಇಲ್ಲಿ ವಾಹನ ಸಂಚಾರವನ್ನು ಮುಂದಿನ ಮೂರು ದಿನಗಳ ಕಾಲ ಸಂಪೂರ್ಣ ನಿಷೇಧಿಸಲಾಗಿದೆ.
ಸುಬ್ರಹ್ಮಣ್ಯ -ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಬರುವ ಈ ರಸ್ತೆಯ ದೇವಸ್ಯ ಎಂಬಲ್ಲಿ ಸೇತುವೆ ಹಾನಿಯಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಈ ಸೇತುವೆಯ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಇಲ್ಲಿನ ಹೊಸ ಸೇತುವೆಯ ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದ್ದು, ಮೂರು ದಿನಗಳ ಒಳಗಾಗಿ ಸಂಚಾರವನ್ನು ಮರುಸ್ಥಾಪಿಸಲು ಕ್ರಮ ವಹಿಸಲಾಗಿದೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಸಹಕಾರ ನೀಡುವಂತೆ ಲೋಕೋಪಯೊಗಿ ಇಲಾಖೆಯ ಪುತ್ತೂರು ವಿಭಾಗದ ಪ್ರಕಟಣೆ ತಿಳಿಸಿದೆ.
Next Story