ಉಳ್ಳಾಲ ಪೇಟೆ: ಎಸ್ಸೆಸ್ಸೆಫ್ ಪ್ರತಿಭೋತ್ಸವ
ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಪೇಟೆ ಶಾಖೆ ಇದರ ನಿರೀಕ್ಷೆಗಳ ನೀಲ ನಕ್ಷೆ ಸ್ಲೋಗನ್ ನೊಂದಿಗೆ ಪ್ರತಿಭೋತ್ಸವ ಕಾರ್ಯಕ್ರಮವು ಶಾಖಾ ಅಧ್ಯಕ್ಷರಾದ ಶಾಕಿರ್ ಹಿವಮಿ ಸಖಾಫಿ ಪೇಟೆ ಅಧ್ಯಕ್ಷತೆಯಲ್ಲಿ ಅ. 17ರಂದು ಇರ್ಷಾದ್ ಕಂಪೌಂಡ್, ಪೇಟೆ ಮತ್ತು ಅ. 21ರಂದು ಇಶಾಕ್ ಕಂಪೌಂಡ್ ಬಸ್ತಿಪಡಪ್ಪುವಿನಲ್ಲಿ ನಡೆಯಿತು.
ಈ ಸಂದರ್ಭ ಸೈಯ್ಯದ್ ಜವಾದ್ ತಂಙಳ್ ಉಸ್ತುವಾರಿ ರಮೀಝ್, ಪ್ರಧಾನ ಕಾರ್ಯದರ್ಶಿ ಇರ್ಷಾದ್, ಸರ್ಫ್ ರಾಝ್, ಮೆಹರಾಲಿ ಉಪಸ್ಥಿತರಿದ್ದರು. ಸೈಯ್ಯದ್ ಜವಾದ್ ತಂಙಳ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.