ಪೊಲೀಸರ ಭ್ರಷ್ಟಾಚಾರ ಘೋರ ತಪ್ಪು: ಡಿ.ರೂಪಾ
ಬೆಂಗಳೂರು, ಜ.22: ಸರಕಾರಿ ಅಧಿಕಾರಿಗಳು ಅಕ್ರಮ ಆಸ್ತಿ ಮಾಡುವುದು ಅಪರಾಧ. ಅದರಲ್ಲೂ ಪೊಲೀಸ್ ಇಲಾಖೆಯವರು ಮಾಡಿದರೆ, ಘೋರ ತಪ್ಪು ಎಂದು ಕರಕುಶಲ ನಿಗಮದ ನಿರ್ದೇಶಕಿ ಡಿ.ರೂಪಾ ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಅವರ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಡಿ.ರೂಪಾ ಉತ್ತರಿಸಿಲ್ಲ ಏಕೆ ಎನ್ನುವ ಚರ್ಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ ಅವರು, ಐಪಿಎಸ್ ಅಧಿಕಾರಿಗಳ ಭ್ರಷ್ಟಾಚಾರ ಬೇಲಿಯೇ ಎದ್ದು ಹೊಲ ಮೇಯ್ದಂತೆ. ಈ ನಿಟ್ಟಿನಲ್ಲಿ ಭ್ರಷ್ಟರನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಹೇಳಿದ್ದಾರೆ.
ಐಪಿಎಸ್ ಆಗಲಿ, ಯಾರೇ ಆಗಲಿ ಭ್ರಷ್ಟರ ಮೇಲೆ ಕ್ರಮ ಆಗಬೇಕು. ಉನ್ನತ ಮಟ್ಟದ ತನಿಖೆ ನಡೆಯಬೇಕು. ಅಲ್ಲದೆ, ನಾನು ಭ್ರಷ್ಟಾಚಾರದ ಪರವಾಗಿ ನಿಂತಿಲ್ಲ. ಯಾರೇ ತಪ್ಪು ಮಾಡಲಿ ಅದನ್ನು ನಾನು ಖಂಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
Next Story