ದೇಶದಲ್ಲಿ ಕೋಮುವಾದಿ ಮನಸ್ಥಿತಿ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಜೀವಂತ ಉದಾಹರಣೆ: ಡಾ.ಎಚ್.ಸಿ.ಮಹದೇವಪ್ಪ
ಅಂಬೇಡ್ಕರ್ ಗೆ ನ್ಯಾಯಾಧೀಶರಿಂದ ಅಗೌರವ ಪ್ರಕರಣ
ಬೆಂಗಳೂರು, ಜ.27: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದು ಹಾಕಿದರೆ ಮಾತ್ರವೇ ಧ್ವಜಾರೋಹಣ ಮಾಡುವುದಾಗಿ ಬಾಬಾ ಸಾಹೇಬರ ವಿರಚಿತ ಕಾನೂನುಗಳನ್ನು ಕಾಪಾಡಲು ನೇಮಕವಾಗಿರುವ ನ್ಯಾಯಾಧೀಶರೇ ರಾಯಚೂರಿನಲ್ಲಿ ಹೇಳುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಇದು ಫ್ಯೂಡಲ್ ಹಾಗೂ ಕೋಮುವಾದಿ ಮನಸ್ಥಿತಿಯು ಈ ದೇಶದಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಜೀವಂತ ಉದಾಹರಣೆ. ಇಂತಹ ಪೂರ್ವಾಗ್ರಹ ಪೀಡಿತ ನ್ಯಾಯಾಧೀಶರು ಇನ್ನೆಂತಹ ತೀರ್ಪು ನೀಡಬಲ್ಲರು? ಎಂದು ನೆನೆಸಿಕೊಂಡರೆ ಆತಂಕವಾಗುತ್ತದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ನ್ಯಾಯಾಂಗ ಎಂಬುದು ಜನ ಸಾಮಾನ್ಯರ ನಂಬಿಕೆಯ ಗೂಡು. ಅಂತಹ ನಂಬಿಕೆಯು ಕಳೆದು ಹೋಗುವುದಕ್ಕೆ ಅವಕಾಶ ನೀಡಬಾರದು. ಕೂಡಲೇ ಉಚ್ಚ ನ್ಯಾಯಾಲಯವು ಇಂತಹ ಬೇಜವಾಬ್ದಾರಿ ನ್ಯಾಯಾಧೀಶರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಾ.ಎಚ್.ಸಿ.ಮಹದೇವಪ್ಪ ಒತ್ತಾಯಿಸಿದ್ದಾರೆ.
ಇಂತಹ ಅಜ್ಞಾನಿ ಮತ್ತು ಪೂರ್ವಾಗ್ರಹ ಪೀಡಿತ ನ್ಯಾಯಾಧೀಶರು ಇನ್ನೆಂತಹ ತೀರ್ಪು ನೀಡಬಲ್ಲರು?!
— Dr H.C.Mahadevappa (@CMahadevappa) January 26, 2022
ಕೂಡಲೇ ಉಚ್ಛ ನ್ಯಾಯಾಲಯವು ಇಂತಹ ಬೇಜವಾಬ್ದಾರಿ ನ್ಯಾಯಾಧೀಶರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸುತ್ತೇನೆ
2/2https://t.co/pdY0snU0Fnhttps://t.co/pdY0snU0Fn