ರಥಬೀದಿ ಗೆಳೆಯರು ವತಿಯಿಂದ ಪಾ.ವೆಂ.ಆಚಾರ್ಯ ಸ್ಮಾರಕ ತುಳು ಕವನ ವಾಚನ ಸ್ಪರ್ಧೆ
ಉಡುಪಿ, ಫೆ.9: ಉಡುಪಿಯ ರಥಬೀದಿ ಗೆಳೆಯರು ವತಿಯಿಂದ ಪಾ.ವೆಂ. ಆಚಾರ್ಯ ಸ್ಮಾರಕ ತುಳು ಕವನ ವಾಚನ ಸ್ಪರ್ಧೆ ಯೊಂದನ್ನು ಆಯೋಜಿಸಲಾಗಿದೆ.
ಇದರಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸ್ಪರ್ಧಿಸಬಹುದಾಗಿದೆ. ಪಾ.ವೆಂ. ಆಚಾರ್ಯರ ‘ಬಯ್ಯಮಲ್ಲಿಗೆ’ ಕವನ ಸಂಕಲನದ ಒಂದು ಕವನವನ್ನು ವಾಚಿಸುವ ವೀಡಿಯೊವನ್ನು ಕಳುಹಿಸಬೇಕು.
ಪ್ರಾರಂಭದಲ್ಲಿ ವಿದ್ಯಾರ್ಥಿ ತನ್ನ ಹೆಸರು, ಕಾಲೇಜಿನ ಹೆಸರು, ತರಗತಿ ತಿಳಿಸಿ ಕವನದ ಹೆಸರು ತಿಳಿಸಿ ವಾಚನ ಆರಂಭಿಸಬೇಕು. ಪಾ.ವೆಂ. ಆಚಾರ್ಯರ ‘ಬಯ್ಯಮಲ್ಲಿಗೆ’ ಕವನ ಸಂಕಲನವು - ಡಿಡಿಡಿ.ಛಿಞ.ಜ್ಟಿಜ್ಞ್ಠಿಜಿ.ಟ್ಟಜ- ವೆಬ್ಸೈಟ್ನಲ್ಲಿ ಲಭ್ಯವಿದೆ. ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ 2,000ರೂ. ಹಾಗೂ ದ್ವಿತೀಯ ಬಹುಮಾನ 1,000ರೂ. ನಗದು ನೀಡಲಾಗುವುದು.
ವಿಡಿಯೋವನ್ನು ಈ-ಮೇಲ್ನಲ್ಲಿ -We Transfer- ಮೂಲಕ mhupadhya@gmail.com-ಗೆ ಕಳುಹಿಸಿಕೊಡಬಹುದು. ವೀಡಿಯೋ ಕಳುಹಿಸಲು ಫೆ.28 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿ ಗಳಿಗೆ ಮೊಬೈಲ್ ಸಂ.:9448215779ನ್ನು ಸಂಪರ್ಕಿಸುವಂತೆ ರಥಬೀದಿ ಗೆಳೆಯರು ಅದ್ಯಕ್ಷ ಪ್ರೊ.ಹಿರಿಯಡಕ ಮುರಳೀಧರ ಉಪಾದ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.