ಮಲ್ಪೆ: ಕೆರೆಯಲ್ಲಿ ಮುಳುಗಿ ಬಾಲಕ ಮೃತ್ಯು
ಮಲ್ಪೆ : ಆಟ ಆಡಲು ಹೋಗಿದ್ದ ಬಾಲಕನೋರ್ವ ಅಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಎಂಬಲ್ಲಿ ಮೇ 21ರಂದು ಸಂಜೆ ವೇಳೆ ಕಡೆಕಾರ್ ಕೆರೆಮಠ ಎಂಬಲ್ಲಿ ನಡೆದಿದೆ.
ಮೃತರನ್ನು ಕಡೆಕಾರಿನ ಗಿರೀಶ್ ಉಪಾಧ್ಯಾಯ ಎಂಬವರ ಮಗ ರಾಘವ (7) ಎಂದು ಗುರುತಿಸಲಾಗಿದೆ. ರಾಘವ ಶಾಲೆಯಿಂದ ಬಂದ ಬಳಿಕ ಕೆರೆಮಠದ ಸಮೀಪ ಆಟ ಆಡಲು ಹೋಗಿದ್ದನು. ಈ ವೇಳೆ ಈತ ಕೆರೆಯಲ್ಲಿ ಅಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾನೆ.
ರಾತ್ರಿಯಾದರೂ ಮನೆಗೆ ಬಾರದ ರಾಘವನನ್ನು ಹುಡುಕಾಡಿದಾಗ ಮೇ 22ರಂದು ಹುಡುಕಾಡಿದಾಗ ಕೆರೆಯ ಹತ್ತಿರ ರಾಘವನ ಬಟ್ಟೆ ಮತ್ತು ಚಪ್ಪಲಿ ಪತ್ತೆಯಾಯಿತು. ಬಳಿಕ ಮಲ್ಪೆಯ ಮುಳುಗು ತಜ್ಞ ಈಶ್ವರ ಮಲ್ಪೆಕೆರೆಯಲ್ಲಿ ಹುಡುಕಾಡಿದಾಗ ಬೆಳಗ್ಗೆ 10.30ರ ಸುಮಾರಿಗೆ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story