ಏಕನಾಥ್ ಶಿಂಧೆ ಬಣ ಸೇರಿದ ಮತ್ತೆ ಮೂವರು ಶಾಸಕರು
Photo: PTI
ಮುಂಬೈ: ಶಿವಸೇನೆಯ ಮತ್ತೆ ಮೂವರು ಶಾಸಕರು ಮುಂಬೈಯಿಂದ ಗುವಾಹಟಿಗೆ ತೆರಳಿ ಬಂಡಾಯದ ಕೇಂದ್ರ ಬಿಂದುವಾಗಿರುವ ಹಿರಿಯ ನಾಯಕ ಏಕನಾಥ್ ಶಿಂಧೆ ಬಣ ಸೇರಿದ್ದಾರೆ. ಇದೀಗ ಶಿಂಧೆ ಪಾಳಯದಲ್ಲಿ 36 ಶಾಸಕರು (ಪಕ್ಷದ 55 ಶಾಸಕರಲ್ಲಿ) ಇದ್ದಾರೆ.
ದೀಪಕ್ ಕೇಸಕರ್ (ಸಾವಂತವಾಡಿ ಶಾಸಕ), ಮಂಗೇಶ್ ಕುಡಾಲ್ಕರ್ (ಚೆಂಬೂರ್ ಶಾಸಕ) ಹಾಗೂ ಸದಾ ಸರ್ವಾಂಕರ್ (ದಾದರ್ ಶಾಸಕ) ಅವರು ಮುಂಬೈನಿಂದ ಗುವಾಹಟಿಗೆ ಬೆಳಗ್ಗಿನ ವಿಮಾನದಲ್ಲಿ ತೆರಳಿದರು ಎಂದು NDTV ವರದಿ ಮಾಡಿದೆ.
ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹತೆಯನ್ನು ಎದುರಿಸದೆ ಪಕ್ಷವನ್ನು ವಿಭಜಿಸಲು ಏಕನಾಥ ಶಿಂಧೆ ಪಾಳಯಕ್ಕೆ ಈಗ ಕೇವಲ ಓರ್ವ ಶಾಸಕನ ಅಗತ್ಯವಿದೆ. ಐವರು ಪಕ್ಷೇತರ ಶಾಸಕರು ಶಿಂಧೆ ಅವರ ಜೊತೆಗಿದ್ದಾರೆ.
Next Story