ಬದಿಯಡ್ಕ | ತಾಯಿಯ ಕೊಲೆ ಪ್ರಕರಣದ ಆರೋಪಿ ಆತ್ಮಹತ್ಯೆ
ಕಾಸರಗೋಡು, ಜೂ.27: ತಾಯಿ ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕದಿಂದ ವರದಿಯಾಗಿದೆ.
ಬದಿಯಡ್ಕ ಗೋಳಿಯಡ್ಕ ಶಾಂತಿಪಳ್ಳ ನಿವಾಸಿ ವೆಂಕಪ್ಪ ನಾಯ್ಕ(40) ಮೃತಪಟ್ಟ ವ್ಯಕ್ತಿ. ಏಕಾಂಗಿಯಾಗಿ ಈತ ಮನೆಯಲ್ಲಿ ವಾಸವಾಗಿದ್ದನು. ವರ್ಷ ಗಳ ಹಿಂದೆ ತಾಯಿ ಕಮಲರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಈತ ಜೈಲು ಶಿಕ್ಷೆಗೆ ಅನುಭವಿಸಿ ಬಳಿಕ ಬಿಡುಗಡೆಗೊಂಡಿದ್ದನು. ಆ ಬಳಿಕ ಈತ ಕಳವು ಸೇರಿದಂತೆ ಕೆಲವೊಂದು ಪ್ರಕರಣಗಳಲ್ಲೂ ಈತ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story