ಬಂಡಾಯ ಸಚಿವರ ಖಾತೆಗಳನ್ನು ಕಿತ್ತುಕೊಂಡ ಉದ್ಧವ್ ಠಾಕ್ರೆ
Photo:PTI
ಮುಂಬೈ: ಶಿವಸೇನೆಯಲ್ಲಿ ಭಾರೀ ಬಂಡಾಯ ಎದುರಿಸುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಎಂಟು ಬಂಡಾಯ ಸಚಿವರ ಖಾತೆಗಳನ್ನು ಕಿತ್ತುಕೊಂಡಿದ್ದಾರೆ ಎಂದು NDTV ವರದಿ ಮಾಡಿದೆ.
ಇತರ ಬಂಡಾಯ ಶಾಸಕರ ಜೊತೆಗೆ ಈಗ ಗುವಾಹಟಿಯ ಹೋಟೆಲ್ನಲ್ಲಿ ಬೀಡುಬಿಟ್ಟಿರುವ ಈ ಬಂಡಾಯ ಸಚಿವರ ಜವಾಬ್ದಾರಿಗಳನ್ನು ಇತರ ಸಚಿವರಿಗೆ ಮರುಹಂಚಿಕೆ ಮಾಡಲಾಗಿದೆ. ಇದರಿಂದ "ಸಾರ್ವಜನಿಕ ಕಲ್ಯಾಣ ಕಾರ್ಯಗಳು ಸ್ಥಗಿತಗೊಳ್ಳಲಿಲ್ಲ" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಹೊಂದಿದ್ದ ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆಯ ಖಾತೆಗಳನ್ನು ಈಗ ಸುಭಾಷ್ ದೇಸಾಯಿ ಅವರಿಗೆ ಹಸ್ತಾಂತರಿಸಲಾಗಿದೆ.
Next Story