ಜೋಶಿಯವರು ಕಣ್ಣಪಟ್ಟಿ ಬಿಚ್ಚಿ ಸತ್ಯ ತಿಳಿಯುವ ಪ್ರಯತ್ನ ಮಾಡಲಿ
ಪ್ರಹ್ಲಾದ ಜೋಶಿಯವರ ಹೇಳಿಕೆಗೆ ಪ್ರತಿಕ್ರಿಯೆ
ಇಡೀ ದೇಶಕ್ಕೆ ದೇಶವೇ ಸಾಲದ ಸುನಾಮಿಯಲ್ಲಿ ಮುಳುಗಿ ಹೋಗಿದೆ. 2014ರ ಮಾರ್ಚ್ ವೇಳೆಗೆ ದೇಶದ ಸಾಲ ರೂ. 53.11 ಲಕ್ಷ ಕೋಟಿಗಳಷ್ಟಿತ್ತು. ಈಗ ನಿಮ್ಮ ಸರಕಾರದ ಬಜೆಟ್ ದಾಖಲೆಗಳ ಪ್ರಕಾರವೇ 152.18 ಲಕ್ಷ ಕೋಟಿ ರೂ.ಗೆ ಏರಿಕೆ ಯಾಗಿದೆ. ಈ ಕುರಿತು ನಿಮಗೆ ಮಾಹಿತಿ ಬೇಕಿದ್ದರೆ ನಿಮ್ಮ ಸರಕಾರ ಅಧಿಕೃತವಾಗಿ ಬಿಡುಗಡೆ ಮಾಡಿರುವ ಬಜೆಟ್ ರಿಸಿಪ್ಟ್ಸ್ ಪುಸ್ತಕದ ಪುಟ ಸಂಖ್ಯೆ 49 ಅನ್ನು ನೋಡಿ. ಆದರೆ ಅನೇಕ ಸಂಸ್ಥೆಗಳು ಮಾಡಿರುವ ಸಮೀಕ್ಷೆ ಪ್ರಕಾರ ದೇಶದ ಸಾಲ ರೂ. 155 ಲಕ್ಷ ಕೋಟಿಗೆ ಮುಟ್ಟುತ್ತದೆ. ಅಂದರೆ ಕಳೆದ 8 ವರ್ಷಗಳಲ್ಲಿ ಮೋದಿಯವರ ಸರಕಾರ ಮಾಡಿದ ಸಾಲದ ಪ್ರಮಾಣ 102 ಲಕ್ಷ ಕೋಟಿ ರೂ.
ದಿನಾಂಕ: 2-7-2022 ರಂದು ನಾನು ‘ಮೋದಿ ಸರಕಾರಕ್ಕೆ, ವರುಷ ಎಂಟು; ಅವಾಂತರ ನೂರೆಂಟು’ ಎಂಬ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ಕೂಡಲೇ ಕೇಂದ್ರದ ಸಚಿವರಾದ ಶ್ರೀಯುತ ಪ್ರಹ್ಲಾದ ಜೋಶಿಯವರು, ‘‘ಸಿದ್ದರಾಮಯ್ಯ ಪುಸ್ತಕ ಸುಳ್ಳಿನ ಕಂತೆ’’ ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿದರು. ತಮಗೆ ನೀಡಿರುವ ಕಲ್ಲಿದ್ದಲು ಮತ್ತು ಗಣಿ ಖಾತೆಯನ್ನು ಸಮರ್ಥವಾಗಿ ನಿಭಾಯಿಸದೆ, ಬೇಸಿಗೆಗೆ ಬೇಕಾದಷ್ಟು ಕಲ್ಲಿದ್ದಲನ್ನು ಸ್ಟಾಕ್ ಮಾಡಿಕೊಳ್ಳದೆ ದೇಶವನ್ನು ಕತ್ತಲಲ್ಲಿ ಮುಳುಗಿಸಿದ, ರಾಜ್ಯಗಳ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸಮರ್ಪಕವಾಗಿ ಕಲ್ಲಿದ್ದಲನ್ನು ಪೂರೈಸದೆ ನಮ್ಮ ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಸಲಾಗದ ಜೋಶಿಯವರು ನನ್ನ ಆರ್ಥಿಕತೆಯ ಕುರಿತಾದ ಅಧ್ಯಯನವನ್ನು ಸುಳ್ಳು ಎಂದರು. 42 ಪುಟಗಳ ನನ್ನ ಪುಸ್ತಕವನ್ನು ಸರಿಯಾಗಿ ಓದದೆ ಕೂಡಲೇ ಒಂದು ಪ್ರತಿಕ್ರಿಯೆಯನ್ನು ಬರೆದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಕರ್ನಾಟಕದ ಜೋಶಿಯವರು ದೇಶದ ಫೈನಾನ್ಸ್ ಬಗ್ಗೆ, ರಕ್ಷಣೆಯ ಬಗ್ಗೆ, ಕೃಷಿಕರ ಬಗ್ಗೆ ಮಾತನಾಡುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಎಂದು ಸಂತೋಷ ಪಟ್ಟೆ ಹಾಗೂ ಎಷ್ಟು ಪತ್ರ, ಪುಸ್ತಕ ಬರೆದರೂ ಪ್ರತಿಕ್ರಿಯೆ ನೀಡದೆ ಕುಂಬ ಕರ್ಣ ನಿದ್ದೆಯಲ್ಲಿರುವ ರಾಜ್ಯದ ಬೊಮ್ಮಾಯಿ ಸರಕಾರದ ಸಚಿವರಿಗಿಂತ ಜೋಶಿಯವರೇ ಬೆಟರ್ ಇದ್ದಾರೆ. ಹಿಂದೆ ಕೊರೋನ ವ್ಯಾಕ್ಸಿನ್ ಬಗ್ಗೆ ನಾನು ಬರೆದಾಗಲೂ ಇವರೇ ಪ್ರತಿಕ್ರಿಯಿಸಿದ್ದರು. ಆದ್ದರಿಂದ ಜೋಶಿಯವರ ಹೇಳಿಕೆಯನ್ನು ನಿರ್ಲಕ್ಷಿಸದೆ ಪ್ರತಿಕ್ರಿಯೆ ನೀಡಬಯಸುತ್ತೇನೆ. ಹೆತ್ತವಳಿಗೆ ಹೆಗ್ಗಣ ಮುದ್ದು ಎಂಬ ಗಾದೆಯಂತೆ ನಡೆದುಕೊಳ್ಳುತ್ತಿರುವ ಜೋಶಿಯವರಿಗೆ ಸತ್ಯ ಸಂಗತಿಗಳೇನು ಎಂದು ತಿಳಿಸುವ ಪ್ರಯತ್ನ ಮಾಡುತ್ತೇನೆ. ಗಾಂಧಾರಿಯಂತೆ ಕಣ್ಣುಪಟ್ಟಿ ಕಟ್ಟಿಕೊಂಡು ಧೃತರಾಷ್ಟ್ರನಂತಹ ಕೇಂದ್ರವನ್ನು ಸಮರ್ಥಿಸುತ್ತಿರುವ ಜೋಶಿಯವರು ಕಣ್ಣಪಟ್ಟಿ ಬಿಚ್ಚಿ ಸತ್ಯ ತಿಳಿಯುವ, ಅನಾಹುತ ತಡೆಯುವ ಕೆಲಸ ಮಾಡಬೇಕೆಂದು ಕೋರುತ್ತೇನೆ.
ಜೋಶಿಯವರ ಹೇಳಿಕೆಯನ್ನು ನೋಡಿದ ಮೇಲೆ ಕೇಂದ್ರದ ಸಚಿವರೊಬ್ಬರು ಇಷ್ಟೊಂದು ಹಾಸ್ಯಾಸ್ಪದವಾಗಿ ಮೋದಿಯವರ ಸರಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರಲ್ಲಾ ಎಂದು ನನಗೆ ಮುಜುಗರವಾಯಿತು. ಒಂದು ದಿನ ತುಸು ಬಿಡುವು ಮಾಡಿಕೊಂಡು ಅವರ ಹೇಳಿಕೆಯನ್ನು ಪೂರ್ತಿಯಾಗಿ ಗಮನಿಸಿ ಈ ಹೇಳಿಕೆಯನ್ನು ಹಾಗೂ ಪ್ರಶ್ನೆಗಳನ್ನು ಬಿಡುಗಡೆ ಮಾಡುತ್ತಿದ್ದೇನೆ. ಜೋಶಿಯವರ ಹೇಳಿಕೆಯಲ್ಲಿ ನಾನು ಬರೆದ ಪುಸ್ತಕದಲ್ಲಿನ ಅಂಕಿ ಅಂಶಗಳು ಸುಳ್ಳು ಎಂದು ಹೇಳುವ ಒಂದೂ ಮಾಹಿತಿ ಇಲ್ಲ. ಇತ್ತೀಚೆಗೆ ಮೋದಿಯವರ ಸರಕಾರಕ್ಕೆ 8 ವರ್ಷ ತುಂಬಿತೆಂದು ಕೇಂದ್ರ, ರಾಜ್ಯ ಸರಕಾರಗಳು ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಬಿಡುಗಡೆ ಮಾಡಿದ ಜಾಹೀರಾತಿನಲ್ಲಿರುವ ಅಂಶಗಳನ್ನೇ ನನ್ನ ಪುಸ್ತಕಕ್ಕೆ ಪ್ರತಿಕ್ರಿಯೆ ನೀಡಲು ಬಳಸಿಕೊಂಡಿದ್ದಾರೆ.
"today our currency is on death bed. It is in terminal stage and urgently needs attention of a doctor."
Training guns at the Congress-led ruling coalition at the Centre, he said "at the time of coming to power this Government had promised to reduce inflation within 100 days, but that has eluded the country."
"At present both - rupee and UPA Government, have lost their value. Time has come to stop our country from destruction. The Central Government is misguiding the country”
* ರಾಷ್ಟ್ರದ ಸಾಲದ ಬಗ್ಗೆ ನಾನು ವಿಶೇಷವಾಗಿ ವಿವರಿಸಿದ್ದೇನೆ. ಜೋಶಿಯವರು ಪಾರ್ಲಿಮೆಂಟಿನಲ್ಲಿ ಕೂರುವುದರಿಂದ, ಒಕ್ಕೂಟ ಸರಕಾರದ ಸಚಿವರಾಗಿರುವುದರಿಂದ ಈ ಕುರಿತು ಮಾಹಿತಿ ತರಿಸಿಕೊಳ್ಳುವುದು ಕಷ್ಟದ ವಿಚಾರವಲ್ಲ. ಆದರೂ ನಾನು ಅವರಿಗೆ ಈ ದಾಖಲೆಗಳು ಎಲ್ಲೆಲ್ಲಿ ಸಿಗುತ್ತವೆ ಎಂದು ತಿಳಿಸಬಯಸುತ್ತೇನೆ. ದಿನಾಂಕ: 30-6-2022ರಂದು ಭಾರತದ ರಿಸರ್ವ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಅವರು ವಿದೇಶಿ ಸಾಲದ ಬಗ್ಗೆ ಪ್ರೆಸ್ ಸ್ಟೇಟ್ ಮೆಂಟ್ ಬಿಡುಗಡೆ ಮಾಡಿದ್ದಾರೆ. ಅದರಂತೆ 2013ರಲ್ಲಿ ಭಾರತದ ವಿದೇಶಿ ಸಾಲ 409.4 ಬಿಲಿಯನ್ ಡಾಲರುಗಳಷ್ಟಿತ್ತು. (2013ರಲ್ಲಿ ಸರಾಸರಿ ರೂಪಾಯಿ ಮೌಲ್ಯ ರೂ. 58.55ರಷ್ಟಿತ್ತು ಆ ಲೆಕ್ಕದಲ್ಲಿ ನೋಡಿದರೆ ರೂ. 23.97 ಲಕ್ಷ ಕೋಟಿಗಳಷ್ಟು ವಿದೇಶಿ ಸಾಲ ಯುಪಿಎ ಸರಕಾರ ಅವಧಿಯಲ್ಲಿತ್ತು.) ಜೂನ್ 2022ರಲ್ಲಿ ವಿದೇಶಿ ಸಾಲ 620.7 ಬಿಲಿಯನ್ ಡಾಲರುಗಳಿಗೇರಿದೆ, ಅಂದರೆ ರೂ. 49.5 ಲಕ್ಷ ಕೋಟಿಯಷ್ಟಾಯಿತು. ರೂಪಾಯಿಯ ಮೌಲ್ಯ ಒಂದು ಡಾಲರಿಗೆ ಈಗ ರೂ. 79ಕ್ಕೆ ಕುಸಿದಿದೆ. 2013-14ರಲ್ಲಿ ಮೋದಿಯವರು ಸೇರಿದಂತೆ ಬಿಜೆಪಿ ಲೀಡರುಗಳು ಏನು ಮಾತಾಡಿದ್ದರು ಎಂಬುದು ನಿಮಗೆ ಮರೆತು ಹೋಯಿತೆ ಪ್ರಹ್ಲಾದ ಜೋಶಿಯವರೇ? * * ಈ ಮಾತುಗಳನ್ನು ನರೇಂದ್ರ ಮೋದಿಯವರು ಆಗಸ್ಟ್ 24, 2013 ರಂದು ಗುಜರಾತಿನ ರಾಜ್ ಕೋಟೆಯಲ್ಲಿ ನಿಂತು ಮಾತನಾಡಿದ್ದರು. ಆ ದಿನ ಭಾರತದ ರೂಪಾಯಿಯ ಮೌಲ್ಯ ಡಾಲರಿನ ಎದುರಿಗೆ 63.76 ಬೆಲೆ ಇತ್ತು. ಇಂದು ರೂಪಾಯಿಯ ಮೌಲ್ಯ ಪಾತಾಳಕ್ಕೆ ಕುಸಿದಿದೆ. 80 ರೂಪಾಯಿ ದಾಟುವ ಹಂತ ಬಂದಿದೆ. ಈಗ ದೇಶದ ಜನರು ಹೇಳಬೇಕಾದ ಪರಿಸ್ಥಿತಿ ಬಂದಿದೆ, ಪ್ರಸ್ತುತ ರೂಪಾಯಿಯ ಹಾಗೂ ಮೋದಿ ಸರಕಾರಗಳೆರಡೂ ತಮ್ಮ ಮೌಲ್ಯ ಕಳೆದುಕೊಂಡಿವೆ. ಇಂದು ರೂಪಾಯಿ ಡೆತ್ ಬೆಡ್ನಲ್ಲಿದೆ. ಕುಸಿದು ಪಾತಾಳಕ್ಕೆ ಬೀಳುತ್ತಿರುವ ದೇಶವನ್ನು ತುರ್ತಾಗಿ ತಡೆದು ನಿಲ್ಲಿಸಬೇಕಾಗಿದೆ. ಆದರೆ ಮೋದಿ ಸರಕಾರದ ಪರವಾಗಿ ಪ್ರಹ್ಲಾದ ಜೋಶಿಯವರೇ ನೀವು ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದೀರಿ.
* ದೇಶದಲ್ಲಿ ವಿದೇಶಿ ಸಾಲವೊಂದೇ ಹೆಚ್ಚಾಗಿಲ್ಲ ಮಾನ್ಯ ಜೋಶಿಯವರೇ, ಇಡೀ ದೇಶಕ್ಕೆ ದೇಶವೇ ಸಾಲದ ಸುನಾಮಿಯಲ್ಲಿ ಮುಳುಗಿ ಹೋಗಿದೆ. 2014ರ ಮಾರ್ಚ್ ವೇಳೆಗೆ ದೇಶದ ಸಾಲ ರೂ. 53.11 ಲಕ್ಷ ಕೋಟಿಗಳಷ್ಟಿತ್ತು. ಈಗ ನಿಮ್ಮ ಸರಕಾರದ ಬಜೆಟ್ ದಾಖಲೆಗಳ ಪ್ರಕಾರವೇ 152.18 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಈ ಕುರಿತು ನಿಮಗೆ ಮಾಹಿತಿ ಬೇಕಿದ್ದರೆ ನಿಮ್ಮ ಸರಕಾರ ಅಧಿಕೃತವಾಗಿ ಬಿಡುಗಡೆ ಮಾಡಿರುವ ಬಜೆಟ್ ರಿಸಿಪ್ಟ್ಸ್ ಪುಸ್ತಕದ ಪುಟ ಸಂಖ್ಯೆ 49 ಅನ್ನು ನೋಡಿ. ಆದರೆ ಅನೇಕ ಸಂಸ್ಥೆಗಳು ಮಾಡಿರುವ ಸಮೀಕ್ಷೆ ಪ್ರಕಾರ ದೇಶದ ಸಾಲ ರೂ. 155 ಲಕ್ಷ ಕೋಟಿಗೆ ಮುಟ್ಟುತ್ತದೆ. ಅಂದರೆ ಕಳೆದ 8 ವರ್ಷಗಳಲ್ಲಿ ಮೋದಿಯವರ ಸರಕಾರ ಮಾಡಿದ ಸಾಲದ ಪ್ರಮಾಣ 102 ಲಕ್ಷ ಕೋಟಿ ರೂ.
* ಇದಿಷ್ಟೇ ಅಲ್ಲ ಜೋಶಿಯವರೇ, ಮೋದಿಯವರ ಸರಕಾರ ರಾಜ್ಯಗಳಿಗೆ ಕೊಡಬೇಕಾದ ಪ್ರಮಾಣದಲ್ಲಿ ಅನುದಾನಗಳನ್ನು ಕೊಡುತ್ತಿಲ್ಲ, ಇದರಿಂದಾಗಿ ರಾಜ್ಯಗಳು ದೊಡ್ಡ ಮಟ್ಟದ ಸಾಲಗಾರ ರಾಜ್ಯಗಳಾಗುತ್ತಿವೆ. 2013-14ರಲ್ಲಿ ದೇಶದ ಎಲ್ಲ ರಾಜ್ಯಗಳ ಸಾಲದ ಒಟ್ಟು ಮೊತ್ತ ರೂ. 22.12 ಲಕ್ಷ ಕೋಟಿ ಇತ್ತು. 2022ರ ಮಾರ್ಚ್ ವೇಳೆಗೆ ರಾಜ್ಯಗಳ ಸಾಲದ ಪ್ರಮಾಣ ರೂ. 70 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ರೂ. 80ರಿಂದ 85 ಲಕ್ಷ ಕೋಟಿಗಳಿಗೆ ರಾಜ್ಯಗಳ ಸಾಲದ ಪ್ರಮಾಣ ಏರಿಕೆಯಾಗಲಿದೆ. ನಿಮಗೆ ಮಾಹಿತಿ ಬೇಕಿದ್ದರೆ ಆರ್ಬಿಐ ದಾಖಲೆಗಳನ್ನು ನೋಡಿ. ಈ ಕುರಿತು ಪಿಆರ್ಎಸ್ ಸಂಸ್ಥೆ ನಡೆಸಿರುವ ಅಧ್ಯಯನಗಳನ್ನು ಗಮನಿಸಿ. ಇದರಿಂದಾಗಿ ರಾಜ್ಯ ಮತ್ತು ದೇಶದ ಒಟ್ಟು ಸಾಲ ಈ ವರ್ಷದ ಕೊನೆಗೆ ರೂ. 235-240 ಲಕ್ಷ ಕೋಟಿಗಳಿಗೆ ಏರಿಕೆಯಾಗುತ್ತಿದೆ. ಇದು 2013-14ರಲ್ಲಿ ರೂ. 75.23 ಲಕ್ಷ ಕೋಟಿಗಳಷ್ಟಿತ್ತು. ಆಗ ಪ್ರತೀ ಭಾರತೀಯರ ತಲೆಯ ಮೇಲೆ ರೂ. 57,692 ಕೋಟಿಗಳಷ್ಟು ಸಾಲವಿದ್ದರೆ, ಇಂದು ದೇಶದಲ್ಲಿ 138+ ಕೋಟಿ ಜನಸಂಖ್ಯೆ ಇದೆ. 235-240 ಲಕ್ಷ ಕೋಟಿ ಸಾಲವಿರುವುದರಿಂದ ಪ್ರತಿಯೊಬ್ಬರ ತಲೆಯ ಮೇಲೆ 1,70,290 ಲಕ್ಷ ರೂಪಾಯಿಗೂ ಹೆಚ್ಚು ಸಾಲವಿದೆ.
* ರಾಜ್ಯಗಳ ಸಾಲದ ಪ್ರಮಾಣ ಜಿಎಸ್ಡಿಪಿಗೆ ಎದುರಾಗಿ ಇಂದು ಶೇ.32ನ್ನು ದಾಟುತ್ತಿದೆ. ಇದು ಶೇ. 25ರ ಒಳಗೆ ಇರಬೇಕು. ರಾಜ್ಯ ಮತ್ತು ದೇಶದ ಒಟ್ಟು ಸಾಲ ಜಿಡಿಪಿಗೆ ಎದುರಾಗಿ ಶೇ. 60ರ ಒಳಗೆ ಇರಬೇಕು. ಆದರೆ ಇಂದು ಶೇ.90ರಷ್ಟನ್ನು ದಾಟುತ್ತಿದೆ. ದೇಶವು ದುಡಿದ 100 ರೂ.ಯಲ್ಲಿ 40 ರೂ.ಗಿಂತ ಹೆಚ್ಚು ಹಣ ಬಡ್ಡಿ ಕಟ್ಟಲು ಖರ್ಚಾಗುತ್ತಿದೆ. ಇವೆಲ್ಲದರ ಅರಿವು ತಮಗೆ ಇಲ್ಲವೇ? ಇದು ಮೋದಿ ಸರಕಾರ ಮಾಡಿದ ಮಹಾ ಡಿಸಾಸ್ಟರ್ ತಾನೆ?
* ಜೋಶಿಯವರು ಯುಪಿಎ ಸರಕಾರ ಸಬ್ಸಿಡಿಗಳನ್ನು ನೀಡಿ ದೇಶವನ್ನು ಸಾಲದ ಕೂಪದಲ್ಲಿ ಮುಳುಗಿಸಿದ್ದರು. ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಕೆಟ್ಟ ಆರ್ಥಿಕ ನೀತಿಗಳನ್ನು ಸಿದ್ದರಾಮಯ್ಯನವರು ಅಭಿವೃದ್ಧಿ ಎಂದು ಕರೆಯುತ್ತಿದ್ದಾರೆ ಎಂದು ಬರೆದಿದ್ದಾರೆ. ಜೋಶಿಯವರೇ ದೇಶದ ಜಿಡಿಪಿ ಬೆಳವಣಿಗೆಯನ್ನು ಒಮ್ಮೆ ನೋಡಿ. 2014ರಲ್ಲಿ ಶೇ.7.41ರಷ್ಟಿದ್ದ ಜಿಡಿಪಿ ಬೆಳವಣಿಗೆ ದರ 2016 ರ ನಂತರ ಒಂದೇ ಸಮನೆ ಕುಸಿಯುತ್ತಿದೆ. 2017ರಲ್ಲಿ ಶೇ.6.80, 2018ರಲ್ಲಿ ಶೇ.6.53, 2019ರಲ್ಲಿ ಶೇ.4.04ರಷ್ಟು, 2021ರಲ್ಲಿ ಮೈನಸ್ ಶೇ.7.96 ರಷ್ಟಾಗಿದೆ. ಈ ಮಾಹಿತಿಯನ್ನು ಕೇಂದ್ರ ಸರಕಾರವೇ ಬಿಡುಗಡೆ ಮಾಡಿದೆ. ಅದರ ಪ್ರಕಾರ ಯುಪಿಎನ ಮನಮೋಹನ್ ಸಿಂಗ್ ಸರಕಾರದ ಜಿಡಿಪಿ ಬೆಳವಣಿಗೆ ದರ ಶೇ. 6.81ರಷ್ಟಿತ್ತು. ಮೋದಿ ಸರಕಾರದ ಜಿಡಿಪಿ ಬೆಳವಣಿಗೆ ದರ ಶೇ. 5.9ನ್ನೂ ದಾಟುತ್ತಿಲ್ಲ. ಹಾಗಿದ್ದರೆ ಯಾರದ್ದು ಕೆಟ್ಟ ಆಡಳಿತ. ಯಾರು ದೇಶವನ್ನು ಬರ್ಬಾದು ಮಾಡುತ್ತಿದ್ದಾರೆ?
* ಮೋದಿಯವರ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದ ನಂತರ ಜನರ ಮೇಲಿನ ತೆರಿಗೆಯ ಹೊರೆಯನ್ನು ಇನ್ನಿಲ್ಲದಷ್ಟು ಹೆಚ್ಚಿಸಿದ್ದಾರೆ. 2013-14 ರಲ್ಲಿ ದೇಶದ ಬೊಕ್ಕಸಕ್ಕೆ ಜನರು ಕಟ್ಟುತ್ತಿದ್ದ ಪರೋಕ್ಷ ತೆರಿಗೆ 4.95 ಲಕ್ಷ ಕೋಟಿ ರೂ. 2022-23ರಲ್ಲಿ ನಮ್ಮದೇ ಜನರು ಕಟ್ಟುತ್ತಿರುವ ತೆರಿಗೆ 13.38 ಲಕ್ಷ ಕೋಟಿ. ಜನರ ಮೇಲಿನ ತೆರಿಗೆ ಹೊರೆ ಒಂದೇ ಸಮನೆ ಏರಿಕೆಯಾಗುತ್ತಿದೆ. ತೆರಿಗೆಯ ಜೊತೆಯಲ್ಲಿ ಮೋದಿಯವರ ಸರಕಾರ ಸೆಸ್ಸುಗಳ ನೆಪದಲ್ಲಿ ಲೂಟಿ ಮಾಡುತ್ತಿದೆ. 2013-14ರಲ್ಲಿ 1 ಲಕ್ಷ ಕೋಟಿಗಳಷ್ಟು ಸೆಸ್ಸನ್ನು ಸಂಗ್ರಹಿಸುತ್ತಿದ್ದರೆ ಅದು 2021-22 ರ ವೇಳೆಗೆ 4 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ರಾಜ್ಯಗಳಿಗೆ ನಯಾ ಪೈಸೆಯಷ್ಟು ಪಾಲಿಲ್ಲ.
* ಮನಮೋಹನಸಿಂಗ್ ಅವರ ನೇತೃತ್ವದ ಸರಕಾರ 2013-14ರಲ್ಲಿ ಪೆಟ್ರೋಲ್ ಮೇಲೆ ರೂ. 9.21ರಷ್ಟು ಮತ್ತು ಡೀಸೆಲ್ ಮೇಲೆ ರೂ. 3.45 ತೆರಿಗೆ ವಿಧಿಸುತ್ತಿತ್ತು. ಇದರಲ್ಲಿ ಸೆಸ್ ಇರಲಿಲ್ಲ. ಆದರೆ ಮೋದಿಯವರ ಸರಕಾರ 2021ರಲ್ಲಿ ಪೆಟ್ರೋಲ್, ಡೀಸೆಲ್ ದರಗಳನ್ನು ಪರಿಷ್ಕರಿಸಿದ ನಂತರವೂ ಪೆಟ್ರೋಲ್ನಿಂದ ರೂ. 26.5 ಹಾಗೂ ಡೀಸೆಲ್ ಮೇಲೆ ರೂ. 20 ಸೆಸ್ ಅನ್ನು ಸಂಗ್ರಹಿಸಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ಮುಂತಾದ ಸೆಸ್ಗಳಿಂದಲೇ ಮೋದಿಯವರ ಸರಕಾರ ಕಳೆದ 8 ವರ್ಷಗಳಿಂದ ರೂ. 26 ಲಕ್ಷ ಕೋಟಿಗಳನ್ನು ಸಂಗ್ರಹಿಸಿದೆ. * ಮೋದಿಯವರ ಸರಕಾರ ಕರ್ನಾಟಕದಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸುಮಾರು ರೂ. 1.5 ಲಕ್ಷ ಕೋಟಿಗಳಷ್ಟು ಸೆಸ್ ಮತ್ತು ತೆರಿಗೆಗಳನ್ನು ಸಂಗ್ರಹಿಸಿದೆ. ಮನಮೋಹನಸಿಂಗ್ ಅವರ ಸರಕಾರ 2013-14ರಲ್ಲಿ ವರ್ಷಕ್ಕೆ ಗರಿಷ್ಟ ಅಂದರೆ ರೂ. 3.5 ಸಾವಿರ ಕೋಟಿಯನ್ನು ಇಂಧನದ ಬಾಬತ್ತಿನಿಂದ ಕರ್ನಾಟಕದಿಂದ ಸಂಗ್ರಹಿಸಿದ್ದರೆ ಕಳೆದ ವರ್ಷ ಒಂದರಲ್ಲೇ ರೂ. 35,000 ಕೋಟಿಗೂ ಹೆಚ್ಚು ಸೆಸ್ ಮತ್ತು ತೆರಿಗೆಗಳನ್ನು ಮೋದಿಯವರ ಸರಕಾರ ಸಂಗ್ರಹಿಸಿದೆ.