ಮುಹರ್ರಂ ಹಿನ್ನೆಲೆಯಲ್ಲಿ ಇಮಾಂ ಹುಸೈನ್ ರ ತ್ಯಾಗ, ಸಹೋದರತ್ವದ ಕುರಿತು ಪ್ರಧಾನಿ ಮೋದಿ ಟ್ವೀಟ್
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮುಹರ್ರಂ ಸಂದರ್ಭದಲ್ಲಿ ಇಮಾಮ್ ಹುಸೇನ್ ಅವರ ತ್ಯಾಗವನ್ನು ಸ್ಮರಿಸಿದರು.
ಕರ್ಬಲಾ ಯುದ್ಧದಲ್ಲಿ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಹುಸೇನ್ ಹುತಾತ್ಮರಾದ ನೆನಪಿಗಾಗಿ ಮತ್ತು ಇನ್ನಿತರ ಪ್ರಮುಖ ಘಟನೆಗಳ ಹಿನ್ನೆಲೆಯಲ್ಲಿ ಮುಸ್ಲಿಮರು ಈ ದಿನವನ್ನು ಆಚರಿಸುತ್ತಾರೆ.
"ಇಂದು ಹಝರತ್ ಇಮಾಮ್ ಹುಸೇನ್ (ಅ.ಸ) ಅವರ ತ್ಯಾಗವನ್ನು ಸ್ಮರಿಸಿಕೊಳ್ಳುವ ದಿನವಾಗಿದೆ. ಸತ್ಯಕ್ಕಾಗಿ ಅವರ ಅಚಲ ಬದ್ಧತೆ ಮತ್ತು ಅನ್ಯಾಯದ ವಿರುದ್ಧದ ಅವರ ಹೋರಾಟಕ್ಕಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಸಮಾನತೆ ಮತ್ತು ಸಹೋದರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Today is a day to recall the sacrifices of Hazrat Imam Hussain (AS). He is remembered for his unwavering commitment to truth and his fight against injustice. He also placed great importance on equality and brotherhood.
— Narendra Modi (@narendramodi) August 9, 2022
Next Story