ಫಾಝಿಲ್ ಕುಟುಂಬಕ್ಕೆ ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿಯಿಂದ ಪರಿಹಾರ ವಿತರಣೆ
ಮಂಗಳೂರು, ಆ.13: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುರತ್ಕಲ್ ನ ಮಂಗಳಪೇಟೆ ನಿವಾಸಿ ಮುಹಮ್ಮದ್ ಫಾಝಿಲ್ ಕುಟುಂಬಕ್ಕೆ ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ 1.20 ಲಕ್ಷ ರೂ. ಪರಿಹಾರ ವಿತರಿಸಲಾಯಿತು.
ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ನೇತೃತ್ವದಲ್ಲಿ ಫಾಝಿಲ್ ಮನೆಗೆ ತೆರಳಿದ ಬಜ್ಪೆ ಜಮಾಅತ್ ನಿಯೋಗವು ಫಾಝಿಲ್ ರ ಮಗ್ಫಿರತ್ ಗಾಗಿ ಪ್ರಾರ್ಥಿಸಿ ಕುಟುಂಬಕ್ಕೆ ಪರಿಹಾರವನ್ನು ವಿತರಿಸಿ ಸಾಂತ್ವನ ಹೇಳಿತು.
ನಿಯೋಗದಲ್ಲಿ ಮಸೀದಿಯ ಖತೀಬ್ ಮೌಲಾನ ಮನ್ಸೂರ್ ಸಅದಿ, ಪ್ರಧಾನ ಕಾರ್ಯದರ್ಶಿ ಹುಸೇನ್ ಸಿರಾಜ್, ಉಪಾಧ್ಯಕ್ಷರಾದ ಹನೀಫ್, ಅಜ್ಮಲ್ ಅಲಿ, ಇಸ್ಮಾಯೀಲ್ ಜಾವಲಿ, ಹಮೀದ್ ಜರಿ, ಅಬೂಬಕರ್, ಇಬ್ರಾಹೀಂ ಹಾಜಿ, ಇಸ್ಮಾಯೀಲ್ ಉಪಸ್ಥಿತರಿದ್ದರು.
ಬೆಳ್ಳಾರೆಯಲ್ಲಿ ಇತ್ತೀಚೆಗೆ ಕೊಲೆಯಾದ ಮಸೂದ್ ಕುಟುಂಬಕ್ಕೂ 1.20 ಲಕ್ಷ ರೂ ಪರಿಹಾರಧನ ವಿತರಿಸಲು ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿ ನಿರ್ಧರಿಸಿದ್ದು, ಶೀಫ್ರದಲ್ಲೇ ಮಸೂದ್ ಮನೆಗೆ ಜಮಾಅತ್ ನಿಯೋಗ ತೆರಳಿಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story