ಬಂಟ್ವಾಳ: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ
ಬಂಟ್ವಾಳ, ಸೆ.23: ಪಿಕಪ್ ವಾಹನ ಬೈಕ್ ಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೇಪುವಿನಲ್ಲಿ ನಡೆದಿದೆ.
ಬದಿಯಡ್ಕ ನಿವಾಸಿ ಸಂದೇಶ್ (33) ಮೃತ ಯುವಕ.
ಸಂದೇಶ್ ವೃತ್ತಿಯಲ್ಲಿ ವಾಹನ ಚಾಲಕನಾಗಿದ್ದು ಹವ್ಯಾಸಿ ಗಾಯಕನೂ ಆಗಿದ್ದ. ಬಿಜೆಪಿ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಅವರು ಇಂದು ಮಧ್ಯಾಹ್ನ ವೇಳೆಗೆ ವಿಟ್ಲ ಕಡೆಯಿಂದ ಬೈಕ್ ನಲ್ಲಿ ಬದಿಯಡ್ಕ ಕಡೆಗೆ ಪ್ರಯಾಣಿಸುವ ವೇಳೆ ಎದುರಿನಿಂದ ಬಂದ ಪಿಕಪ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story