ಬೆಂಗಳೂರು: ಲಾಲ್ಬಾಗ್ ವೆಸ್ಟ್ ಗೇಟ್ ಮುಂಭಾಗ ದಿ.ಅನಂತಕುಮಾರ್ ಪತ್ರಿಮೆ ಸ್ಥಾಪನೆಗೆ ರಾಜ್ಯ ಸರಕಾರದಿಂದ ಅನುಮೋದನೆ
ಬೆಂಗಳೂರು, ನ.24: ನಗರದ ಲಾಲ್ಬಾಗ್ ವೆಸ್ಟ್ ಗೇಟ್ ಮುಂಭಾಗವೇ ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್ ಅವರ ಪ್ರತಿಮೆಯನ್ನು ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದ್ದು, ಈ ಸಂಬಂಧ ರಾಜ್ಯ ಸರಕಾರವೂ ಅನುಮೋದನೆ ನೀಡಿದೆ.
ಗುರುವಾರ ಈ ಕುರಿತು ಹಣಕಾಸು ವಿಭಾಗದ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಮಾತನಾಡಿ, ಕಳೆದ ಎರಡು ಮೂರು ವರ್ಷದ ಹಿಂದೆಯೇ ಇಲ್ಲಿ ಅನಂತಕುಮಾರ್ ಅವರ ಪ್ರತಿಮೆ ಸ್ಥಾಪನೆಗೆ ನಿರ್ಣಾಯ ಆಗಿತ್ತು. ಅದರಂತೆ ಸರಕಾರ ಅನುಮೋದನೆ ನೀಡಿದೆ. ಈ ಸ್ಥಳವೂ ಆದಿ ಶಂಕರಾಚಾರ್ಯ ಮಠದ್ದು ಅಲ್ಲ. ಈ ಬಗ್ಗೆ ಸರಕಾರ ದಾಖಲಾತಿ ಬಿಡುಗಡೆ ಅಗತ್ಯವಿಲ್ಲ. ಯಾವುದೇ ರೀತಿಯ ವಿವಾದ ಇಲ್ಲದೆ, ಈ ಕಾರ್ಯ ಪೂರ್ಣಗೊಳ್ಳಬೇಕು ಎಂದು ಅವರು ಹೇಳಿದರು.
Next Story