ಬಜೆಟ್ - 2023
ಕೇಂದ್ರ ಬಜೆಟ್ ನಲ್ಲಿ ಚುನಾವಣಾ ರಾಜ್ಯ ಕರ್ನಾಟಕಕ್ಕೆ ರೂ. 5,300 ಕೋಟಿ ಮೊತ್ತದ ಅನುದಾನ ಘೋಷಣೆ
ವಾರ್ತಾ ಭಾರತಿ : 1 Feb, 2023

ನಿರ್ಮಲಾ ಸೀತಾರಾಮನ್ (PTI)
ಹೊಸ ದಿಲ್ಲಿ: ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಕರ್ನಾಟಕಕ್ಕೆ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಟ್ಟು ರೂ. 5,300 ಕೋಟಿ ಮೊತ್ತದ ಅನುದಾನವನ್ನು ಘೋಷಿಸಿದ್ದಾರೆ.
ಈ ಅನುದಾನವನ್ನು ಬರಪೀಡಿತ ಉತ್ತರ ಕರ್ನಾಟಕದಲ್ಲಿ ಸುಸ್ಥಿರ ಕಿರು ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಒದಗಿಸಲಾಗಿದೆ. ಈ ಯೋಜನೆಯು ತುಂಗಭದ್ರಾ ನದಿಯಿಂದ 17.40 ಟಿಎಂಸಿ ನೀರನ್ನು ಮೇಲೆತ್ತಿ ಕೃಷಿ ಭೂಮಿಗಳಿಗೆ ಉಣಿಸುವ ಉದ್ದೇಶ ಹೊಂದಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)